ಕುಂದಾಪುರ: ಭೀಮ ಕೋರೆಗಾಂವ್ ಮೂಲ ನಿವಾಸಿಯರ ವಿಜಯ ದಿನೋತ್ಸವ

Spread the love

ಕುಂದಾಪುರ: ಭೀಮ ಕೋರೆಗಾಂವ್ ಮೂಲ ನಿವಾಸಿಯರ ವಿಜಯ ದಿನೋತ್ಸವ

ಕುಂದಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ವತಿಯಿಂದ ಬುದ್ದನ ಜೆಡ್ಡು ಕರ್ಕುಂಜೆಯಲ್ಲಿ ಭೀಮ ಕೋರೆಗಾಂವ್ ಮೂಲ ನಿವಾಸಿಯರ ವಿಜಯ ದಿನೋತ್ಸವವನ್ನು ಆಚರಿಸಲಾಯಿತು.

ಬೌದ್ದ ಉಪಾಸಕರಾದ ಶಂಬುಮಾಸ್ಟರ್, ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ಸಂಸ್ಥಾಪಕ ಅಧ್ಯಕ್ಷ ಉದಯ್ ಕುಮಾರ್ ತಲ್ಲೂರು, ಹಾಗೂ ಬೌದ್ದ ಉಪಾಸಕರಾದ ಚೆನ್ನ ಬಸವಯ್ಯ ಅವರು ಮೊಂಬತ್ತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೋರೆಗಾಂವ್ ವಿಜಯ್ ದ್ಯೋತಕವಾಗಿ ನಿರ್ಮಿಸಲಾದ ವಿಜಯ ಸ್ಥಂಭಕ್ಕೆ ನಿವೃತ್ತ ಶಿಕ್ಷಣಾಧಿಕಾರಿ ಭಾಸ್ಕರ ಶೆಟ್ಟಿ ಮಾಲಾರ್ಪಣೆ ಮಾಡಿದರು. ಬೌದ್ದ ಉಪಾಸಕರು ಬುದ್ದ ಉಪಾಸನೆಗೈದರು. ಅಕಾಲಿಕ ಮರಣ ಹೊಂದಿದ್ದ ಭೀಮಘರ್ಜನೆಯ ಮಹಿಳಾ ಹೋರಾಟಗಾರ್ತಿ ಕೃಷ್ಣಿಯವರಿಗೆ ಇದೇ ಸಂದರ್ಭದಲ್ಲಿ ಶೃದ್ದಾಂಜಲಿ ಸಲ್ಲಿಸಲಾಯಿತು.

ಜಿಲ್ಲಾ ಸಂಚಾಲಕ ಚಂದ್ರ ಆಲ್ತಾರ್ , ಜಿಲ್ಲಾ ಸಂಘಟನಾ ಸಂಚಾಲಕ ರಾಘು ಶೀರೂರು, ಸಂಜೀವ ಪಳ್ಳಿ, ಮಂಜುನಾಥ ಗುಡ್ಡೆಯಂಗಡಿ, ಚಂದ್ರಮ ತಲ್ಲೂರು, ಸುರೇಂದ್ರ ಬಜಗೋಳಿ, ಹರೀಶ್ ಪರ್ಪಾಡಿ, ಸುಧಾಕರ್ ಸೂರ್ಗೊಳಿ, ಸತೀಶ್ ಸೂರ್ಗೋಳಿ, ರಾಮ ಬೆಳ್ಳಾಲ, ಅಶೋಕ ಕರ್ಕುಂಜೆ, ಸಂಜೀವ ಕೊಡ್ಲಾಡಿ, ಗಣೇಶ್ ಆಜ್ರಿ, ಮಂಜುನಾಥ ಆಜ್ರಿ, ಚಂದ್ರ ಪ್ರಕಾಶ್ ಆಜ್ರಿ, ಸಂತೋಷ್ ಕತ್ಗೋಡು, ಉದಯ್ ಕತ್ಗೋಡು, ಅರುಣ್ ಕೊಡ್ಲಾಡಿ, ಉಷಾ ಕತ್ಗೋಡು, ಗುಲಾಬಿ ಕೊರ್ಗಿ, ದುರ್ಗಿನಕ್ರೆ, ಚಂದ್ರಿಕಾ ಬೆಳ್ಳಾಲ, ರಾಧಿಕಾ ಬೆಳ್ಳಾಲ, ನಾಗೇಶ್ ಪೂಜಾರಿ ಬುದ್ದನ ಜೆಡ್ಡು, ಸತ್ಯನಾರಾಯಣ ಬೆಳ್ಳಾಲ, ಸಂದೇಶ್ ಬ್ರಹ್ಮಾವರ, ರಂಜೀತ್ ಬ್ರಹ್ಮವರ,ರಾಹುಲ್ ಬ್ರಹ್ಮಾವರ ಉಪಸ್ಥಿತರಿದ್ದರು.


Spread the love