ಕುಕನೂರು: ಮಾಂಸದಂಗಡಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು!

Spread the love

ಕುಕನೂರು: ಮಾಂಸದಂಗಡಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು!
 

ಕುಕನೂರು (ಕೊಪ್ಪಳ ಜಿಲ್ಲೆ): ಪಟ್ಟಣದ ನಿವಾಸಿ ಹಾಗೂ ವ್ಯಾಪಾರಿ ಖಾದಿರ್ ಬಾಬಣ್ಣ ಕಲಾಲ ಎಂಬುವವರು ತಮ್ಮ ಮಾಂಸದ ಅಂಗಡಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರನ್ನಿಟ್ಟು ಗಮನ ಸೆಳೆದಿದ್ದಾರೆ.

ಪಟ್ಟಣದ ನಿವಾಸಿ ಖಾದಿರ್ ಬಾಬಣ್ಣ ಕಲಾಲ ಅವರು 20 ವರ್ಷಗಳಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.

2008ರಲ್ಲಿ ಪಟ್ಟಣಕ್ಕೆ ಶೋಭಾ ಕರಂದ್ಲಾಜೆ ಅವರು ಚುನಾವಣೆಗೆ ಪ್ರಚಾರಕ್ಕಾಗಿ ಬಂದಾಗ ಅವರ ರಾಜಕೀಯ ಮಾತು ಕೇಳಿ ಅಭಿಮಾನಿಯಾಗಿ ಬದಲಾಗಿದ್ದಾರೆ.

ಖಾದೀರ್ ಕಲಾಲ್ 5 ವರ್ಷಗಳ ಹಿಂದೆ ಶೋಭಾ ಕರಂದ್ಲಾಜೆ ಅವರ ಪೋಟೊವನ್ನು ಕೈ ಮೇಲೆ ಟ್ಯಾಟೊ ಹಾಕಿಸಿಕೊಂಡಿದ್ದಾರೆ. ಈಗ ಹೊಸದಾಗಿ ಪ್ರಾರಂಭಿಸಿರುವ ಅಂಗಡಿಗೆ ಶೋಭಾ ಕರಂದ್ಲಾಜೆ ಮಟನ್ ಮತ್ತು ಚಿಕನ್ ಸೆಂಟರ್ ಹೆಸರನ್ನು ಇಟ್ಟಿರುವ ನಾಮಫಲಕ ಈಗ ಎಲ್ಲೆಡೆ ವೈರಲ್ ಆಗಿದೆ.

ನಾನು ಕಳೆದ 20 ವರ್ಷಗಳಿಂದ ಶೋಭಾ ಕರಂದ್ಲಾಜೆ ಮೇಡಂ ಅವರ ಅಭಿಮಾನಿಯಾಗಿದ್ದೇನೆ. ಮಾಜಿ ಸಚಿವರಾದ ಹಾಲಪ್ಪ ಆಚಾರ್ ಅವರ ಮನೆಯಲ್ಲಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅಭಿಮಾನಿಯಾಗಿ ಅವರ ಹೆಸರನ್ನು ನನ್ನ ಅಂಗಡಿಗೆ ಇಟ್ಟಿದ್ದೇನೆ ಎಂದು ಖಾದಿರ್ ಕಲಾಲ ‘ಪ್ರಜಾವಾಣಿ’ಗೆ ತಿಳಿಸಿದರು.


Spread the love
Subscribe
Notify of

0 Comments
Inline Feedbacks
View all comments