Home Mangalorean News Kannada News ಕುಕ್ಕೆ ಸರ್ಪಸಂಸ್ಕಾರ ವಿವಾದ: ಚೈತ್ರಾ ಕುಂದಾಪುರ ಮತ್ತು ಬೆಂಬಲಿಗರಿಂದ ಹಿಂಜಾವೇ ಮುಖಂಡನ ಮೇಲೆ ಹಲ್ಲೆ!

ಕುಕ್ಕೆ ಸರ್ಪಸಂಸ್ಕಾರ ವಿವಾದ: ಚೈತ್ರಾ ಕುಂದಾಪುರ ಮತ್ತು ಬೆಂಬಲಿಗರಿಂದ ಹಿಂಜಾವೇ ಮುಖಂಡನ ಮೇಲೆ ಹಲ್ಲೆ!

Spread the love

ಕುಕ್ಕೆ ಸರ್ಪಸಂಸ್ಕಾರ ವಿವಾದ: ಚೈತ್ರಾ ಕುಂದಾಪುರ ಮತ್ತು ಬೆಂಬಲಿಗರಿಂದ ಹಿಂಜಾವೇ ಮುಖಂಡನ ಮೇಲೆ ಹಲ್ಲೆ!

ಪುತ್ತೂರು: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸರ್ಪಸಂಸ್ಕಾರ ವಿವಾದದ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ್ ಮತ್ತು ಆಕೆಯ ಬೆಂಬಲಿಗರ ತಂಡವು ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಗುರುಪ್ರಸಾದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸರ್ಪಸಂಸ್ಕಾರದ ಬಗ್ಗೆ ಎದ್ದಿರುವ ವಿವಾದ ಕುರಿತಂತೆ ಚೈತ್ರಾ ಕುಂದಾಪುರ ಮತ್ತು ಸುಬ್ರಹ್ಮಣ್ಯದ ಸ್ಥಳೀಯರ ನಡುವೆ ಫೇಸ್ ಬುಕ್ ನಲ್ಲಿ ಚರ್ಚೆ ನಡೆಯುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದ ಹಿಂದೂಪರ ಸಂಘಟನೆಗಳ ಮುಖಂಡರು ಸುಬ್ರಹ್ಮಣ್ಯಕ್ಕೆ ಬಂದು ಮಾತನಾಡುವಂತೆ ತಿಳಿಸಿದ್ದರು. ಅದರಂತೆ ಚೈತ್ರಾ ಕುಂದಾಪುರ್ ಮತ್ತಾಕೆಯ ತಂಡ ಇನ್ನೋವಾ ಕಾರಿನಲ್ಲಿ ಸುಬ್ರಹ್ಮಣ್ಯಕ್ಕೆ ಬಂದಿತ್ತು ಎನ್ನಲಾಗಿದೆ.

ಸುಬ್ರಹ್ಮಣ್ಯದಲ್ಲಿ ಎರಡೂ ತಂಡಗಳ ನಡುವೆ ಮಾತುಕತೆ ನಡೆದಿದ್ದು ವಿಕೋಪಕ್ಕೆ ತಿರುಗಿದೆ. ಈ ಸಂದರ್ಭ ಚೈತ್ರಾ ಕುಂದಾಪುರ ಮತ್ತು ಆಕೆಯ 8 ಮಂದಿ ಬೆಂಬಲಿಗರು ಹಿಂದೂಜಾಗರಣಾ ವೇದಿಕೆ ಮುಖಂಡ ಗುರುಪ್ರಸಾದ್ ಅವರ ಮೇಲೆ ಹಲ್ಲೆ ನಡೆಸಿದೆ. ಗಂಭೀರವಾಗಿ ಗಾಯಗೊಂಡ ಗುರುಪ್ರಸಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚೈತ್ರಾ ಕುಂದಾಪುರ ಮತ್ತು ಆಕೆಯ ಬೆಂಬಲಿಗರನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.


Spread the love

Exit mobile version