Home Mangalorean News Kannada News ಕುಡಿತದ ಅಮಲಿನಲ್ಲಿ ಗೆಳೆಯನ ಕೊಲೆ

ಕುಡಿತದ ಅಮಲಿನಲ್ಲಿ ಗೆಳೆಯನ ಕೊಲೆ

Spread the love

ಕುಡಿತದ ಅಮಲಿನಲ್ಲಿ ಗೆಳೆಯನ ಕೊಲೆ

ಕಾರ್ಕಳ: ಕುಡಿತದ ಅಮಲಿನಲ್ಲಿ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಕುಕ್ಕುಂದೂರು ಗ್ರಾಮದ ಜ್ಯೋತಿ ನಗರ ಬೇಲೋಟ್ಟು ಎಂಬಲ್ಲಿ ಅ.21ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ಬೇಲೋಟ್ಟು ನಿವಾಸಿ ಅಲೆಕ್ಸಾಂಡರ್ ಜಾನ್ ಡಿಮೆಲ್ಲೋ(64) ಎಂದು ಗುರುತಿಸಲಾಗಿದೆ. ಕೊಲೆಗೈದ ಬಳಿಕ ತಲೆಮರೆಸಿಕೊಂಡಿದ್ದ ಮೃತರ ಸ್ನೇಹಿತ ಮುಂಬೈ ನಿವಾಸಿ ಟ್ರಾಯ್ ಹಿಲರಿ(54) ಎಂಬಾತನನ್ನು ಪೊಲೀಸರು ಇಂದು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮುಂಬೈಯಲ್ಲಿ ಹಡಗಿನಲ್ಲಿ ಅಲೆಕ್ಸಾಂಡರ್‌ಗೆ ಟ್ರಾಯ್ ಹಿಲರಿಯ ಪರಿಚಯವಾಗಿತ್ತು. ಮುಂದೆ ಇವರಿಬ್ಬರು ಸ್ನೇಹಿತರಾಗಿ ಬಹಳ ಆತ್ಮೀಯರಾಗಿದ್ದರು. ಹಿಲರಿ ಕಾರ್ಕಳದ ಅಲೆಕ್ಸಾಂಡರ್ ಮನೆಗೆ ಬಂದು ಹೋಗುತ್ತಿದ್ದರು. ಹಿಲರಿ ಅ.21ರಂದು ಅಲೆಕ್ಸಾಂಡರ್ ಅವರ ಕಾರ್ಕಳದ ಮನೆಗೆ ಆಗಮಿಸಿದ್ದು, ಇಬ್ಬರೂ ಜತೆಯಾಗಿ ಮನೆಯಲ್ಲಿಯೇ ಮದ್ಯ ಸೇವಿಸುತ್ತಿದ್ದರೆನ್ನಲಾಗಿದೆ.

ಈ ಸಂದರ್ಭ ಅಲೆಕ್ಸಾಂಡರ್ ಹಾಗೂ ಟ್ರಾಯ್ ಹಿಲರಿ ಮಧ್ಯೆ ಜಗಳವಾಯಿತು. ಇದರಿಂದ ಕುಪಿತಕೊಂಡ ಹಿಲರಿ ಕುಡಿತದ ಮತ್ತಿನಲ್ಲಿ ಅಲೆ ಕ್ಸಾಂಡರ್‌ರನ್ನು ಚೂರಿಯಿಂದ ಇರಿದರೆನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಅಲೆಕ್ಸಾಂಡರ್ ಮೃತಪಟ್ಟರೆಂದು ತಿಳಿದುಬಂದಿದೆ. ಪೂರ್ವ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿ ಮೃತರ ಸಹೋದರ ವಾಲ್ಟರ್ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version