Home Mangalorean News Kannada News ಕುಲಶೇಖರ ಯಕ್ಷಗಾನ ಸಮಿತಿಯ ಸುವರ್ಣ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕುಲಶೇಖರ ಯಕ್ಷಗಾನ ಸಮಿತಿಯ ಸುವರ್ಣ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Spread the love

ಕುಲಶೇಖರ ಯಕ್ಷಗಾನ ಸಮಿತಿಯ ಸುವರ್ಣ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕುಲಶೇಖರ ಹತ್ತು ಸಮಸ್ತರ ಯಕ್ಷಗಾನ ಸೇವಾ ಸಮಿತಿಯ ಸುವರ್ಣ ಮಹೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕೃಮವು ಆದಿತ್ಯವಾರ ಬೆಳಿಗ್ಗೆ ಕುಲಶೇಖರಕಲ್ಪನೆ ಮೈದಾನದಲ್ಲಿ ನಡೆಯಿತು.

ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರು ಶಾಸಕರು ಆದ ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ಮಂಗಳೂರಿನ ಮೇಯರ್ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರು ಕೆ .ಭಾಸ್ಕರ್‍ರವರು ದೀಪ ಬೆಳಗಿಸಿ ಕಾರ್ಯಕೃಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಮಾಜಿ ವಿಧಾನ ಪರಿಷದ್ ಸದಸ್ಯರು ಸಮಿತಿಯಗೌರವಾಧ್ಯಕ್ಷರುಆದ ಮೋನಪ್ಪ ಭಂಡಾರಿಯವರು , ಸು. ಮ .ಸಮಿತಿಯ ಪ್ರಧಾನ ಕಾರ್ಯಧರ್ಶಿಗಳು ಆದ ಎಸ್‍ರಾಮಪ್ರಸಾದ್ , ಸೇವಾ ಸಮಿತಿಯ ಗೌರವಾಧ್ಯಕ್ಷರುಗಳಾದ ಹಿರಿಯರು ಆಧ ಎಚ್ ಪದ್ಮನಾಭರಾವ್ ಹಾಗೂ ಎ .ನರಸಿಂಹ . ಅಧ್ಯಕ್ಷರಾಧ ಅನಿಲ್ ಕೆ ರಾವ್ , ಪ್ರಧಾನ ಕಾರ್ಯಧರ್ಶಿ ಸುಂದರ್ ಚೌಕಿ , ವೇದಾಂತ ವಿದ್ವಾನ್ ಸುರೇಶ್ ಭಾರಿತ್ತಾಯ ಉಪಸ್ಥಿತರಿದ್ದು ಎಲ್ಲರೂಒಟ್ಟು ಸೇರಿ ವಿದ್ಯುಕ್ತವಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ವಾಸುದೇವರಾವ್ ಕುಡುಪು ಸ್ವಾಗತಿಸಿದರು ಸಂಘಟನಾ ಕಾರ್ಯಧರ್ಶಿ ಮೋಹನದಾಸ್ ಕಾರ್ಯಕೃಮ ನಿರೂಪಿಸಿದರು .ಊರಿನ ಪ್ರಮುಖರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕೃಮದಲ್ಲಿ ಪಾಲ್ಗೊಂಡಿದ್ದರು .


Spread the love

Exit mobile version