Home Mangalorean News Kannada News ಕೃಷ್ಣ ಮಠದ ಕುರಿತು ಫೇಸ್ ಬುಕ್ಕಿನಲ್ಲಿ ನಿಂದನೆ – ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಕೃಷ್ಣ ಮಠದ ಕುರಿತು ಫೇಸ್ ಬುಕ್ಕಿನಲ್ಲಿ ನಿಂದನೆ – ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು

Spread the love

ಕೃಷ್ಣ ಮಠದ ಕುರಿತು ಫೇಸ್ ಬುಕ್ಕಿನಲ್ಲಿ ನಿಂದನೆ – ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಬಗ್ಗೆ ಫೇಸ್ ಬುಕ್ಕಿನಲ್ಲಿ ಅವಹೇಳನಾಕಾರಿಯಾಗಿ ನಿಂದಿಸಿ ಧಾರ್ಮಿಖ ಭಾವನೆಗಳಿಗ ಧಕ್ಕೆ ಉಂಟು ಮಾಡಿರುವ ಕುರಿತು ಉಡುಪಿ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಕುರಿತು ಹಯಗ್ರೀವ ಭಕ್ತವೃಂದ ಸೋದೆ ಮಠದ ಪದಾಧಿಕಾರಿ ಡಾ. ಯು ಯೋಗಿಶ್ ಶೇಟ್ ಠಾಣೆಗೆ ದೂರು ನೀಡಿದ್ದು, ಜುಲೈ 29 ರಂದು ಬೆಳಿಗ್ಗೆ 02:41 ಗಂಟೆಗೆ ಆರೋಪಿತರಾದ ಡಾ/ ಸಂಪತ್ ಕುಮಾರ್ ಕೋಟೇಶ್ವರರವರು ಫೇಸ್ ಬುಕ್‌ನಲ್ಲಿ ದುಡ್ಡಿಗೋಸ್ಕರ ಎರಡೆರಡು ಅಷ್ಟಮಿ ಆಚರಿಸುವ ಉಡುಪಿಯ ಧರ್ಮ  ಪಾಖಂಡಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ? ಎಂದು ಪ್ರಚುರ ಪಡಿಸಿದ್ದು ಈ ಕುರಿತು  ಆರೋಪಿತರಿಗೆ ಶ್ರೀಕೃಷ್ಣ ಮಠದ ಭಕ್ತವೃಂದ ಪ್ರತಿಕ್ರಿಯಿಸಿರುವುದಕ್ಕೆ  ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿ ಫೇಸ್ ಬುಕ್‌ನಲ್ಲಿ ಪ್ರಚಾರ ಮಾಡಿದ್ದು, ಅಲ್ಲದೇ ಅವರ ಅನುಯಾಯಿಗಳಾದ ಆರೋಪಿತರಾದ ಐಶು ಭಟ್, ಐಶ್ವರ್ಯ ಶೆಟ್ಟಿ ಮತ್ತು ಲಕ್ಷ್ಮೀ ಕೆ ರಾವ್ ಎಂಬವರು ಜುಲೈ 29 ರ ರಾತ್ರಿ 9:12 ಕ್ಕೆ ಮತ್ತು ದಿನಾಂಕ 30  ರಂದು  ಶ್ರೀಕೃಷ್ಣ ಮಠದ ಬಗ್ಗೆ ಅವಹೇಳನಕಾರಿಯಾಗಿ ಫೇಸ್ ಬುಕ್‌ನಲ್ಲಿ ಪ್ರಚುರ ವಹಿಸಿ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡಿರುವುದಾಗಿದೆ ಎಂದ ದೂರಿನಲಲ್ಲಿ ತಿಳಿಸಿದ್ದಾರೆ.

ಉಡುಪಿ ನಗರ ಠಾಣೆಯ ಪೋಲಿಸರು ಪ್ರಕರಣದ ದಾಖಲಿಸಿದ್ದಾರೆ.


Spread the love

Exit mobile version