Home Mangalorean News Kannada News ಕೆ.ಎಸ್.ಸಿ.ಎ ಕ್ರಿಕೆಟ್: ಮಂಗಳೂರು ವಲಯಕ್ಕೆ ಹ್ಯಾಟ್ರಿಕ್ ವಿಜಯ

ಕೆ.ಎಸ್.ಸಿ.ಎ ಕ್ರಿಕೆಟ್: ಮಂಗಳೂರು ವಲಯಕ್ಕೆ ಹ್ಯಾಟ್ರಿಕ್ ವಿಜಯ

Spread the love

ಕೆ.ಎಸ್.ಸಿ.ಎ ಕ್ರಿಕೆಟ್: ಮಂಗಳೂರು ವಲಯಕ್ಕೆ ಹ್ಯಾಟ್ರಿಕ್ ವಿಜಯ

ಬೆಂಗಳೂರು :ಕರ್ನಾಟಕರಾಜ್ಯಕ್ರಿಕೆಟ್ ಸಂಸ್ಥೆಯು ಬೆಂಗಳೂರಿನಲ್ಲಿ ಆಯೋಜಿಸಿರುವ 23 ವರ್ಷ ಕೆಳ ಹರೆಯದವರಅಂತರ ವಲಯಕ್ರಿಕೆಟ್ ಪಂದ್ಯಾಟಗಳಲ್ಲಿ ಮಂಗಳೂರು ವಲಯತಂಡವುರಾಯಚೂರು, ಶಿವಮೊಗ್ಗ ಮತ್ತುಧಾರವಾಡ ತಂಡಗಳನ್ನು ಸೋಲಿಸುವ ಮೂಲಕ ಹ್ಯಾಟ್ರಿಕ್ ವಿಜಯದೊಂದಿಗೆ ಪ್ರಾಬಲ್ಯವನ್ನು ಮೆರೆದಿದೆ.

ಮಂಗಳೂರು ವಲಯತಂಡವುತನ್ನ ಮೊದಲ ಪಂದ್ಯದಲ್ಲಿ ರಾಯಚೂರು ವಲಯತಂಡವನ್ನು 7 ವಿಕೇಟುಗಳ ಅಂತರದಿಂದ, ಎರಡನೆಯ ಪಂದ್ಯದಲ್ಲಿ ಶಿವಮೊಗ್ಗ ವಲಯತಂಡವನ್ನು 7 ವಿಕೇಟುಗಳ ಅಂತರದಿಂದ ಪರಾಜಯ ಗೊಳಿಸಿತ್ತು.

ಧಾರವಾಡ ವಲಯದೊಂದಿಗಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಂಗಳೂರು ವಲಯತಂಡವುರಾಮ ಭುತಾನಿಯವರ ಬಿರುಸಿನ ಅರ್ಧ ಶತಕ (7ಬೌಂಡರಿ, 3 ಸಿಕ್ಸರ್), ಸತ್ಯ ಸ್ವರೂಪ್‍ರವರಜವಾಬ್ದಾರಿಯುತಅರ್ಧ ಶತಕ ಮತ್ತುರಕ್ಷಿತ್ (43), ಅಭಿಲಾಷ್ ಶೆಟ್ಟಿ (40) ಇವರುಗಳ ಬ್ಯಾಟಿಂಗ್ ನೆರವಿನಿಂದ 45 ಓವರುಗಳಲ್ಲಿ 8 ವಿಕೇಟುಗಳ ನಷ್ಟದಲ್ಲಿ 259 ರನ್‍ಗಳ ಮೊತ್ತವನ್ನು ಕಲೆ ಹಾಕಿತು. ಆಕಾಶ್ ಪತ್ತರ್ 38ಕ್ಕೆ 4 ವಿಕೇಟ್ ಪಡೆದರು.
ಉತ್ತಮ ಪ್ರತಿಹೋರಾಟ ನೀಡಿದಧಾರವಾಡತಂಡವು 44.5 ಓವರುಗಳಲ್ಲಿ 242 ರನ್‍ಗಳಿಗೆ ಆಲೌಟ್ ಆಗಿ 17 ರನ್‍ಗಳ ಅಂತರದಿಂದ ಸೋಲನ್ನುಕಂಡಿತು. ಮಂಗಳೂರಿನ ಅಭಿಲಾಷ್ ಶೆಟ್ಟಿ 35ಕ್ಕೆ 4, ನಿಶ್ಚಿತ್ ರಾವ್ 46ಕ್ಕೆ 4 ವಿಕೇಟ್ ಪಡೆದರು.


Spread the love

Exit mobile version