Home Mangalorean News Kannada News ಕೇವಲ ಕಾಂಗ್ರೆಸ್ ಮೇಲೆ ಯಾಕೆ ಐಟಿ ದಾಳಿ; ಬಿಜೆಪಿ ಮಂತ್ರಿಗಳ ಮೇಲೂ ಮಾಡಿ; ಸಚಿವ ಪ್ರಮೋದ್...

ಕೇವಲ ಕಾಂಗ್ರೆಸ್ ಮೇಲೆ ಯಾಕೆ ಐಟಿ ದಾಳಿ; ಬಿಜೆಪಿ ಮಂತ್ರಿಗಳ ಮೇಲೂ ಮಾಡಿ; ಸಚಿವ ಪ್ರಮೋದ್ ಸಲಹೆ

Spread the love

ಕೇವಲ ಕಾಂಗ್ರೆಸ್ ಮೇಲೆ ಮಾತ್ರ ಯಾಕೆ ಐಟಿ ದಾಳಿ; ಬಿಜೆಪಿ ಮಂತ್ರಿಗಳ ಮೇಲೂ ಮಾಡಿ; ಸಚಿವ ಪ್ರಮೋದ್ ಸಲಹೆ

ಉಡುಪಿ: ಕೇಂದ್ರ ಸರಕಾರದ ಅಧೀನದಲ್ಲಿರುವ ಐಟಿ ಇಲಾಖೆ ಕೇವಲ ವಿರೋಧ ಪಕ್ಷದ ಮೇಲೆ ಮಾತ್ರ ಧಾಳಿ ಮಾಡುವುದನ್ನು ಬಿಟ್ಟು, ಬಿಜೆಪಿ ಪಕ್ಷದ ಒಂದೆರಡು ಮಂತ್ರಿ, ಶಾಸಕರ ಮೇಲೂ ದಾಳಿ ಮಾಡಲಿ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸಲಹೆ ನೀಡಿದ್ದಾರೆ.

ಅವರು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಚಿವ ಡಿಕೆ ಶಿವಕುಮಾರ್ ಮೇಲೆ ನಡೆದಿರುವ ದಾಳಿ ತಪ್ಪಲ್ಲ ಆದರೆ ಪ್ರಸ್ತುತ ನಡೆದಿರುವ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಕರ್ನಾಟಕದಲ್ಲಿ ಗುಜರಾತ್ ಶಾಸಕರಿಗೆ ರಕ್ಷಣೆ ನೀಡುತ್ತಿರುವುದರಿಂದ ಕೇಂದ್ರದ ಬಿಜೆಪಿ ಸರಕಾರಕ್ಕೆ ಇರಿಸುಮುರಿಸು ಉಂಟಾಗಿದ್ದು ದುರುದ್ದೇಶಪೂರಿತವಾಗಿ ಅವರ ಮನೆ ಹಾಗೂ ಇತರ ಸಂಸ್ಥೆಗಳ ಮೇಲೆ ಧಾಳಿ ನಡೆಸಲಾಗಿದೆ. ಗುಜರಾತ್ ಶಾಸಕರು ಇಲ್ಲಿರುವಾಗ ಈ ದಾಳಿ ಬೇಡವಿತ್ತು ಎಂದಿದ್ದಾರೆ.

ಅಲ್ಲದೆ ಪ್ರಾಮಾಣಿಕ ಮಂತ್ರಿ ಶಾಸಕರು ಯಾರು ಪ್ರಾಮಾಣಿಕವಾಗಿ ತಮ್ಮ ತೆರಿಗೆಯನ್ನು ಪಾವತಿ ಮಾಡುತ್ತಾರೋ ಅವರು ಚಿಂತಿಸಬೇಕಾಗಿಲ್ಲ. ಅಂತಹ ಪ್ರತಿಯೊಬ್ಬರೂ ಕೂಡ ನಿಶ್ಚಿಂತೆಯಿಂದ ನಿದ್ದೆ ಮಾಡಬಹುದು ಎಂದರು.

ಐಟಿ ಧಾಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಡಿ ಕೆ ಶಿವಕುಮಾರ್ ತಾಯಿ ಗೌರಮ್ಮ ಖಾಸಗಿ ವಾಹಿನಿಯೊಂದರಲ್ಲಿ ಮಾಡಿರುವ ಗಂಭೀರ ಆರೋಪದ ಕುರಿತು ಪ್ರತಿಕ್ರಿಯಿಸಿದ ಪ್ರಮೋದ್ ಶಿವಕುಮಾರ್ ತಾಯಿ ಗೌರಮ್ಮ ಎಷ್ಟು ಪರಿಪಕ್ವರೋ ಗೊತ್ತಿಲ್ಲ ಹಾಗೂ ಅವರಿಗೆ ರಾಜಕೀಯದ ಬಗ್ಗೆ ಏನು ಗೊತ್ತಿಲ್ಲದೆ ಮಾಡಿರುವ ಆರೋಪದ ಕುರಿತು ತಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

 


Spread the love
1 Comment
Inline Feedbacks
View all comments
Kadengodlu Shankara Bhat
7 years ago

Pramod-gu nempu shakti onte kammiyaa??
Alzemers ijyatta??

Income tax raids at BJP MP G M Siddeshwaras properties in Karnataka – Oneindia – http://www.oneindia.com/india/income-tax-raids-at-bjp-mp-siddrehwaras-properties-in-karnataka-2438237.html

wpDiscuz
Exit mobile version