Home Mangalorean News Kannada News ಕೊಣಾಜೆ: ಮೃತದೇಹ ಕೊಂಡೊಯ್ಯಲು ಹಣವಿಲ್ಲದ ಕುಟುಂಬಕ್ಕೆ ನೆರವಾದ ಸ್ಪೀಕರ್ ಯು.ಟಿ.ಖಾದರ್

ಕೊಣಾಜೆ: ಮೃತದೇಹ ಕೊಂಡೊಯ್ಯಲು ಹಣವಿಲ್ಲದ ಕುಟುಂಬಕ್ಕೆ ನೆರವಾದ ಸ್ಪೀಕರ್ ಯು.ಟಿ.ಖಾದರ್

Spread the love

ಕೊಣಾಜೆ: ಮೃತದೇಹ ಕೊಂಡೊಯ್ಯಲು ಹಣವಿಲ್ಲದ ಕುಟುಂಬಕ್ಕೆ ನೆರವಾದ ಸ್ಪೀಕರ್ ಯು.ಟಿ.ಖಾದರ್

ಕೊಣಾಜೆ: ಕಾರವಾರ ಮೂಲದ ಮಹಿಳೆಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತದೇಹವನ್ನು ತವರೂರಿಗೆ ಸಾಗಿಸಲು ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ನೆರವಾಗಿದ್ದಾರೆ.

ಅಸೈಗೋಳಿಯ ಕೆಎಸ್‌ಆರ್‌ಪಿಯಲ್ಲಿ ಕ್ಲೀನಿಂಗ್ ಕಾರ್ಯನಿರ್ವಹಿಸುತ್ತಿದ್ದ ಕಾರವಾರ ಮೂಲದ ವಿದ್ಯಾ ವಿಕ್ರಮ್ ಅಂಬಿಗ್ (33) ಎಂಬವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಮೃತದೇಹವನ್ನು ಊರಿಗೆ ಸಾಗಿಸಲು ಕಷ್ಟಪಟ್ಟು ಅತಂತ್ರ ಸ್ಥಿತಿಯಲ್ಲಿದ್ದ ಕುಟುಂಬದ ವಿಚಾರವನ್ನು ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಝರ್ ಷಾ ಅವರು ವಿಧಾನಸಭಾಧ್ಯಕ್ಷರಲ್ಲಿ ತಿಳಿಸಿದ್ದು, ತಕ್ಷಣ ಸ್ಪಂದಿಸಿದ ಸಭಾಧ್ಯಕ್ಷ ಯು.ಟಿ ಖಾದರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವರು ಕಟ್ಟಿದ್ದ ಹಣವನ್ನು ವಾಪಾಸು ಸಿಗುವಂತೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಕಾರವಾರಕ್ಕೆ ಕೊಂಡೊಯ್ಯಲು ಆಂಬ್ಯುಲೆನ್ಸ್ ಮೂಲಕ ಸಹಕರಿಸಿದ್ದಾರೆ.

ಮೃತ ಮಹಿಳೆಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ.

ಮೃತ ಮಹಿಳೆಯ ಕುಟುಂಬದ ಅತಂತ್ರ ಸ್ಥಿತಿಯ ಬಗ್ಗೆ ಯು.ಟಿ.ಖಾದರ್ ಅವರಲ್ಲಿ ತಿಳಿಸಿದ್ದೆ. ಕೂಡಲೇ ಅವರು ಸ್ಪಂದಿಸಿ ಮೃತಕುಟುಂಬಕ್ಕೆ ನೆರವಾಗಿದ್ದಾರೆ ಎಂದು ನಝರ್ ಷಾ ಪ್ರತಿಕ್ರಿಯಿಸಿದ್ದಾರೆ.


Spread the love

Exit mobile version