ಗೌರಿ ಲಂಕೇಶ್ ಪ್ರಕರಣದಲ್ಲಿ ಮುತಾಲಿಕ್ ನಾಯಿ ಶಬ್ದ ಬಳಕೆ ಖಂಡನೀಯ ; ಸುಶೀಲ್ ನೊರೊನ್ಹಾ

Spread the love

ಗೌರಿ ಲಂಕೇಶ್ ಪ್ರಕರಣದಲ್ಲಿ ಮುತಾಲಿಕ್ ನಾಯಿ ಶಬ್ದ ಬಳಕೆ ಖಂಡನೀಯ ; ಸುಶೀಲ್ ನೊರೊನ್ಹಾ

ಮಂಗಳೂರು: ಶ್ರೀ ರಾಮ ಸೇನೆಯ ಮುಖ್ಯಸ್ಥ ಮುತಾಲಿಕ್ ಪತ್ರಿಕಾ ಗೋಷ್ಟಿಯಲ್ಲಿ ಈ ದೇಶದಲ್ಲಿ ಗುರುತಿಸಲ್ಪಟ ಖ್ಯಾತ ಪತ್ರಕರ್ತೆ ಗೌರಿ ಲಂಕೇಶರ ಕೊಲೆ ಪ್ರಕರಣದಲ್ಲಿ ನಾಯಿ ಶಬ್ದವನ್ನು ಬಳಸುವುದು ಅವರ ಅಲ್ಪತನವನ್ನು ತೋರಿಸುತ್ತದೆ ಎಂದು ದಕ ಜಿಲ್ಲೆ ಜೆಡಿಎಸ್ ವಕ್ತಾರ ಸುಶೀಲ್ ನೋರೊನ್ಹಾ ಹೇಳಿದ್ದಾರೆ.

ಅವರು ಶ್ರೀ ರಾಮ ಸೇನೆಯ ಇದಕ್ಕೆ ಸಂಭಂಧ ವಿಲ್ಲದಿದ್ದರೆ ಹಾಗೂ ರಾಜಕೀಯ ಪಕ್ಷಗಳಿಗೆ ಖಂಡಿಸುವುದು ಅವರಿಗೆ ಬಿಟ್ಟ ವಿಚಾರ ಆದರೆ ತನ್ನ ಸ್ವತಂತ್ರ ವಿಚಾರ ದಾರೆಗಳಿಂದ ತನ್ನ ವಿಚಾರಗಳನ್ನು ಸಮಾಜಕ್ಕೆ ತೋರಿಸಿದ ಗೌರಿ ಲಂಕೇಶರ ಬಗ್ಗೆ ಈ ಹೇಳಿಕೆ ಸಮಾಜದ ಉನ್ನತ ಗೌರವ ಉಳ್ಳ ಪತ್ರಿಕಾ ಅಂಗಕ್ಕೆ ಮಾಡಿದ ಅಗೌರವ ಹಾಗೂ ಖಂಡನೀಯ ಎಂದು ಜೆಡಿಎಸ್ ಪಕ್ಷದ ವಕ್ತಾರ ಸುಶೀಲ್ ನೊರೊನ್ಹಾ ಬೇಸರ ವ್ಯಕ್ತ ಪಡಿಸಿದ್ದಾರೆ.


Spread the love