ಜನಾರ್ದನ ಪೂಜಾರಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ವಿನಯ್ ಕುಮಾರ್ ಸೊರಕೆ 

Spread the love

ಜನಾರ್ದನ ಪೂಜಾರಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ವಿನಯ್ ಕುಮಾರ್ ಸೊರಕೆ 

ಕಾಪು: ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರನ್ನು ಬಂಟ್ವಾಳದ ಮನೆಯಲ್ಲಿ ಭೇಟಿ ಮಾಡಿ ಆಶೀರ್ವಾದ ಕೋರಿದರು.

ಬಂಟ್ವಾಳದ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ಹಾಗೂ ಶಾಸಕ ವಿನಯ್ ಕುಮಾರ್ ಸೊರಕೆಯವರು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಕಾಲಿಗೆ ಎರಗಿ ಅವರಿಂದ ಆಶೀರ್ವಾದವನ್ನು ಪಡೆದರು ಅಲ್ಲದೆ ಈ ಚುನಾವಣೆಯಲ್ಲಿ ತನ್ನನ್ನು ಹರಸುವಂತೆ ಬೇಡಿಕೊಂಡರು.

ಈ ಸಂದರ್ಭ ಮಾತನಾಡಿದ ಜನಾರ್ದನ ಪೂಜಾರಿ ವಿನಯವಂತ ರಾಜಕಾರಣಿಯಾದ ನೀವು ಕಾಪು ಕ್ಷೇತ್ರದ ಅಭಿವೃದ್ಧಿ ಯಲ್ಲಿ ಮಹಾ ಪ್ರವಾಹ ಹರಿಸಿದ್ದೀರಿ. ಜನರೊಂದಿಗೆ ನಿರಂತರ ಸಂಪರ್ಕದಿಂದ ಇದ್ದೀರಿ. ಜನರೊಂದಿಗೆ ನೀವು ಇಟ್ಟುಕೊಂಡಿರುವ ಸಂಪರ್ಕ ಹಾಗೂ ಜನರ ಮೇಲೆ ನೀವು ಇಟ್ಟಿರುವ ಗೌರವ ಹಾಗೂ ನಿಮ್ಮ ವಿನಯಶೀಲ ಗುಣವೇ ನಿಮ್ಮ ಗೆಲವುವಿಗೆ ಯಾವುದೇ ತೊಂದರೆ ಅಗುವುದಿಲ್ಲ ಎಂದು ಆಶೀರ್ವದಿಸಿ ದರು.


Spread the love
1 Comment
Inline Feedbacks
View all comments
Mahesh
6 years ago

Atleast now these people are remembering him…