Home Mangalorean News Kannada News ಜಾನುವಾರುಗಳಿಗೆ ಜಂತುಹುಳ ಔಷಧ; ಹಾಲು , ಹಾಲಿನ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿ – ಅಲೆವೂರು ಹರೀಶ್...

ಜಾನುವಾರುಗಳಿಗೆ ಜಂತುಹುಳ ಔಷಧ; ಹಾಲು , ಹಾಲಿನ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿ – ಅಲೆವೂರು ಹರೀಶ್ ಕಿಣಿ

Spread the love

ಜಾನುವಾರುಗಳಿಗೆ ಜಂತುಹುಳ ಔಷಧ; ಹಾಲು , ಹಾಲಿನ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿ – ಅಲೆವೂರು ಹರೀಶ್ ಕಿಣಿ

ಉಡುಪಿ: ಜಾನುವಾರುಗಳಿಗೆ ಜಂತುಹುಳ ಔಷಧಿ ನೀಡಿದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿ ಉತ್ತಮ ಗುಣಮಟ್ಟದ ಹಾಲು ಪಡೆಯಬಹುದಾಗಿದ್ದು ಹೈನುಗಾರರು ಹಾಲು ಉತ್ಪಾದಕರ ಸಹಕಾರ ಸಂಫಗಳು ನೀಡುವ ಉಚಿತ ಜಂತುಹುಳ ನಿವಾರಣಾ ಔಷಧಿ ನೀಡುವ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು, ಆ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಫಗಳ ಅಭಿವೃಧ್ದಿಯಲ್ಲಿ ಕೈಜೋಡಿಸಬೇಕು ಎಂದು ಅಲೆವೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಮನವಿ ಮಾಡಿದರು.

ಅವರು ಅಲೆವೂರು ಕೋಡಿಯಲ್ಲಿ 70ಕ್ಕೂ ಅಧಿಕ ಹಸು ಮತ್ತು 40ಕ್ಕೂ ಅಧಿಕ ಕರುಗಳಿಗೆ ಸಂಘದ ಮೂಲಕ ಉಚಿತ ಔಷಧ ವಿತರಿಸಿ ಮಾತನಾಡಿದರು.

ಕೊರಂಗ್ರಪಾಡಿ ಸಿ.ಎ ಬ್ಯಾಂಕ್ ನಿರ್ದೇಶಕ ಗೋಪಾಲ ನಾಯ್ಕ್, ಸಂಘದ ನಿರ್ದೇಶಕರುಗಳಾದ ಸ್ವಾತಿ ಪ್ರಭು, ಕೃಷ್ಣ ನಾಯ್ಕ್, ಕೃಷ್ಣ ಅಸ್ಕೇಕರ್, ಸಾಮಾಜಿಕ ಕಾರ್ಯಕರ್ತರಾದ ಜಯ ಸೇರಿಗಾರ್, ಕೃಷ್ಣ ಪೂಜಾರಿ, ಮಹೇಶ್ ನಾಯ್ಕ್, ವಾಸುದೇವ ಭಾಗವ, ಸುಬ್ರಾಯ ಸಾಲ್ವಂಕರ್ ಮೊದಲಾದವರು ಉಪಸ್ಥಿತರಿದ್ದರು.
ಹಾಲು ಉತ್ಪಾದಕರ ಸಂಘದ ಕಾರ್ಯನಿರ್ವಹಣಾಧಿಕಾರಿ ರಜನೀಶ್ ನಾಯಕ್ ಸ್ವಾಗತಿಸಿದರು.


Spread the love

Exit mobile version