Home Mangalorean News Kannada News ಜೂನ್ 23 ಮತ್ತು 24 ರಂದು ಉಡುಪಿ  ಜಿಲ್ಲಾ ಮಟ್ಟದ ಹಲಸು ಮೇಳ

ಜೂನ್ 23 ಮತ್ತು 24 ರಂದು ಉಡುಪಿ  ಜಿಲ್ಲಾ ಮಟ್ಟದ ಹಲಸು ಮೇಳ

Spread the love

ಜೂನ್ 23 ಮತ್ತು 24 ರಂದು ಉಡುಪಿ  ಜಿಲ್ಲಾ ಮಟ್ಟದ ಹಲಸು ಮೇಳ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಉಡುಪಿ ಜಿಲ್ಲೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ಹಲಸು ಮೇಳ ಕಾರ್ಯಕ್ರಮವು ಜೂನ್ 23 ಮತ್ತು 24 ರಂದು ಪುಷ್ಪ ಹರಾಜು ಕೇಂದ್ರ(ರೈತ ಸೇವಾ ಕೇಂದ್ರ)ದ ಆವರಣ, ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ ದೊಡ್ಡಣಗುಡ್ಡೆ, ಉಡುಪಿಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಜೂನ್ 23 ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಲಿದ್ದು, ಉಡುಪಿ ಶಾಸಕ ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.


Spread the love

Exit mobile version