ತಪ್ಪಿದ ದುರಂತ! ಬಸ್ ಚಲಾಯಿಸುತ್ತಿದ್ದಾಗಲೇ ಅಸ್ವಸ್ಥಗೊಂಡ ಚಾಲಕ

Spread the love

ತಪ್ಪಿದ ದುರಂತ! ಬಸ್ ಚಲಾಯಿಸುತ್ತಿದ್ದಾಗಲೇ ಅಸ್ವಸ್ಥಗೊಂಡ ಚಾಲಕ

ಹಿಂದಕ್ಕೆ ಚಲಿಸಿ ಮೋರಿಗೆ ತಾಗಿ ನಿಂತ ಬಸ್ಸು, 

ಮಣಿಪಾಲ: ಬಸ್ ಚಲಾಯಿಸುತ್ತಿದ್ದ ವೇಳೆ ಏಕಾಎಕಿಯಾಗಿ ಚಾಲಕ ಅಸ್ವಸ್ಥಗೊಂಡ ಪರಿಣಾಮ ಬಸ್ಸು ಹಿಂದಕ್ಕೆ ಚಲಿಸಿ ರಸ್ತೆ ಬದಿಯ ಮೋರಿ ತಾಗಿ ನಿಂತ ಪರಿಣಾಮ ಸಂಭಾವ್ಯ ಅಪಾಯದಿಂದ ಪ್ರಯಾಣಿಕರು ಪಾರಾದ ಘಟನೆ ಕೆಳ ಪರ್ಕಳ ಸಮೀಪ ಗುರುವಾರ ಸಂಜೆ ನಡೆದಿದೆ.

ಮಾಹಿತಿಗಳ ಪ್ರಕಾರ ಉಡುಪಿಯಿಂದ ಭೈರಂಜೆ ಕಡೆಗೆ ಚಲಿಸುತ್ತಿದ್ದ ಸಿಟಿ ಬಸ್ ಕೆಳ ಪರ್ಕಳ ಬಳಿ ತಲುಪಿದ ವೇಳೆ ಚಾಲಕನಿಗೆ ಆರೋಗ್ಯದ ಸಮಸ್ಯೆ ಎದುರಾಗಿದ್ದು ಈ ವೇಳೆ ಚಾಲಕನ ಕೈಯಿಂದ ಸ್ಟೇರಿಂಗ್ ತಪ್ಪಿ ಹಿಂಬಂದಿಗೆ ಚಲಿಸಿ ರಸ್ತೆ ಪಕ್ಕದಲ್ಲಿ ಬಲಭಾಗಕ್ಕೆ ಚಲಿಸಿ ಮೋರಿ ಬಳಿ ನಿಂತಿದೆ. ಈ ವೇಳೆ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರು ಜಿಗಿದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡಿದ್ದಾರೆ.

ಅಸ್ವಸ್ಥಗೊಂಡ ಚಾಲಕ ಕೃಷ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವೇಳೆ ಬಸ್ಸಿನ ಹಿಂದೆ ವಾಹನ ಸವಾರರು ಇಲ್ಲದೆ ಇದ್ದುದರಿಂದ ಹಾಗೂ ಬಸ್ಸು ನಿಧಾನಗತಿಯಲ್ಲಿ ಚಲಿಸುತ್ತಿದ್ದ ಪರಿಣಾಮ ಸಂಭಾವ್ಯ ಅಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.

ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಕ್ರೇನ್ ಮೂಲಕ ಬಸ್ಸನ್ನು ಮೇಲಕ್ಕೆ ಎತ್ತಿದ್ದು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments