Home Mangalorean News Kannada News ದಕ ಜಿಲ್ಲೆಯಲ್ಲಿ ಗೋಮಾಂಸ ಮಾಫಿಯಾ ಮಟ್ಟ ಹಾಕಲು ಬಜರಂಗದಳ ಒತ್ತಾಯ

ದಕ ಜಿಲ್ಲೆಯಲ್ಲಿ ಗೋಮಾಂಸ ಮಾಫಿಯಾ ಮಟ್ಟ ಹಾಕಲು ಬಜರಂಗದಳ ಒತ್ತಾಯ

Spread the love

ದಕ ಜಿಲ್ಲೆಯಲ್ಲಿ ಗೋಮಾಂಸ ಮಾಫಿಯಾ ಮಟ್ಟ ಹಾಕಲು ಬಜರಂಗದಳ ಒತ್ತಾಯ

ಮಂಗಳೂರು: ಜಿಲ್ಲೆಯಾದ್ಯಂತ ಕಾನೂನು ಕಾಯ್ದೆಗಳ ಮೀರಿ ಪ್ರತಿದಿನ ನೂರಾರು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಹಾಗೂ ಗೋಹತ್ಯೆಯನ್ನು ನಡೆಸುವ ದೊಡ್ಡ ಗೋಮಾಂಸ ಮಾಫಿಯಾ ಕಾರ್ಯಾಚರಿಸುತ್ತಿದ್ದು ತಕ್ಷಣ ಅದನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಮತ್ತು ಪೊಲೀಸ್ ಇಲಾಖೆಯನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಗ್ರಹಿಸಿದೆ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಜರಂಗದಳ ಮುಖಂಡ ಸುನೀಲ್ ಕೆ ಆರ್ ಕಳೆದ 2 ವಾರಗಳಿಂದ 4 ಕಡೆ ಅಕ್ರಮ ಗೋಮಾಂಸ ಸಾಗಾಟದ ಬಗ್ಗೆ ಬಜರಂಗದಳ ಕಾರ್ಯಕರ್ತರು ಕೊಟ್ಟ ಮಾಹಿತಿ ಮೇರೆಗೆ ಪೊಲಿಸರು ವಾಹನಗಳನ್ನು ತಡೆದು ಅಂದಾಜು ಒಂದು ಟನ್ ಗೂ ಅಧಿಕ ಅಕ್ರಮ ಗೋಮಾಂಸ ಪೊಲೀಸರು ವಶಪಡಿಸುವ ಉತ್ತಮ ಕಾರ್ಯ ಮಾಡಿದರೂ ಅಪರಾಧಿಗಳನ್ನು ಬಂಧಿಸುವ ಹಾಗೂ ಇನ್ನಿತರ ಮುಂದಿನ ಕ್ರಮಗಳನ್ನು ಜರಗಿಸಿಲ್ಲ, ಅಕ್ರಮ ಕಸಾಯಿಖಾನೆಗಳು ಜಿಲ್ಲೆಯಲ್ಲಿ ಅವ್ಯಾತವಾಗಿ ನಡೆಯುತ್ತಿದ್ದು ಸುರತ್ಕಲ್, ಜೋಕಟ್ಟೆ, ತಣ್ಣೀರು ಬಾವಿ, ಕುದ್ರೋಳಿ ಮತ್ತು ಫರಂಗಿಪೇಟೆ, ಸೂರಲ್ಪಾಡಿ, ಹಂಡೇಲು, ಕಾರ್ನಾಡು ಈ ಜಾಗಗಳಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ವಿಫಲವಾಗಿದೆ.
ಗೋ ಹತ್ಯೆ ಅಕ್ರಮ ಗೋಸಾಗಾಟದ ಬಗ್ಗೆ ಸಂಘಟಿತವಾಗಿ ಕಾರ್ಯಾಚರಿಸುತ್ತಿರುವ ಗೋಮಾಂಸ ಮಾಫಿಯವನ್ನು ಮಟ್ಟ ಹಾಕಿ ಈ ಕೆಳಗಿನ ಕ್ರಮ ಕೈಗೊಳ್ಳಲು ನಮ್ಮ ಬೇಡಿಕೆ ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ತಿಳಿಸುತ್ತಾ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸುತಿದ್ದೇವೆ.
ಬೇಡಿಕೆಗಳು
1)ಮೇಲೆ ತಿಳಿಸಿದ ಪ್ರಕರಣಗಳಲ್ಲಿ ವಶಪಡಿಸಿದ ಗೋಮಾಂಸಗಳು ಯಾವ ಕಸಾಯಿಖಾನೆಯಿಂದ ತಂದದ್ದು ಎಂದು ಗುರುತಿಸಿ ಮಹಜರು ಆಗಬೇಕು. ಮತ್ತು ಗೋವುಗಳನ್ನು ಕಳವು ಮಾಡಿ ವಧೆ ಮಾಡಿರುವ ಸಂಶಯವಿದ್ದು ಇದರ ಬಗ್ಗೆ ಕೊಲಂಕುಷ ತನಿಖೆ ನಡೆಸಬೇಕು.
2) ತಿಳಿಸಿದ ಪ್ರಕರಣದಲ್ಲಿ ವಶಪಡಿಸಿದಾಗ ಗೋಮಾಂಸ ಯಾರಿಗೆ ಮಾರಾಟಕ್ಕೆ ಕೊಂಡೊಯ್ಯುತ್ತಲಾಗುತ್ತಿತ್ತು ಎಂದು ತನಿಖೆ ನಡೆಸಿ ಗೋಮಾಂಸ ಖರೀದಿ ಮತ್ತು ಮಾರಾಟ ಮಾಡುವವರನ್ನು ಬಂಧಿಸಿ ಪ್ರಕರಣ ದಾಖಲಿಸಬೇಕು.
3) ಸದ್ರಿ ಪ್ರಕರಣದಲ್ಲಿ ಗೋವುಗಳನ್ನು ತಂದ ವಾಹನಗಳನ್ನು ಗುರುತಿಸಿ ವಶಪಡಿಸಬೇಕು
4) ಸದ್ರಿ ಪ್ರಕರಣದಲ್ಲಿ ಗೋವುಗಳ ವಧೆ ನಡೆದ ಮನೆಯನ್ನು ಶಾಶ್ವತವಾಗಿ ಸರಕಾರಕ್ಕೆ ಮುಟ್ಟುಗೊಲು ಹಾಕುವಂತೆ ಸಕಲ ಕ್ರಮ ಕೈಗೊಳ್ಳಬೇಕು.
5) ಸದ್ರಿ ಪ್ರಕರಣದಲ್ಲಿ ವಶಪಡಿಸಿದ ಗೋಮಾಂಸ ವನ್ನು ಯಾವ ಅಕ್ರಮ ಕಸಾಯಿಖಾನೆಯಿಂದ ಗೋವಧೆ ಮಾಡಿದ್ದರು ಆ ಕಸಾಯಿಖಾನೆ/ ಮನೆ ಮಾಲೀಕನನ್ನು ಬಂಧಿಸಿ ಅವರಿಗೆ ಗರಿಷ್ಠ ಶಿಕ್ಷ ಆಗುವಂತೆ ಕ್ರಮ ಕೈಗೊಳ್ಳಬೇಕು.
6) ನಮಗೆ ಸಿಕ್ಕಿರುವ ಮಾಹಿತಿಯಂತೆ ಸುರತ್ಕಲ್, ಜೋಕಟ್ಟೆ, ತಣ್ಣೀರು ಬಾವಿ ಮತ್ತು ಫರಂಗಿಪೇಟೆಯಲ್ಲಿ ಸಹಿತ ಹಲವಾರು ಕಡೆಗಳಲ್ಲಿ ಅಕ್ರಮ ಕಸಾಯ ಖಾನೆಗಳಿದ್ದು ಅವುಗಳ ಚಲನ ವಲನಗಳ ಮೇಲೆ ನಿಗಾ ಇರಿಸಿ ಅಲ್ಲಿಗೆ ಗೋವುಗಳನ್ನು ತರುವ ಹಾಗೂ ಮಾಂಸ ಕೊಂಡು ಹೋಗುವ ಜಾಲವನ್ನು ಕಂಡು ಹುಡುಕಿ ಬಂಧಿಸಬೇಕು ಮತ್ತು ಎಲ್ಲಾ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಿಸಲು ಕ್ರಮ ಕೈಗೊಂಡು ಮತ್ತು ಅದೇ ಜಾಗದಲ್ಲಿ ಹಾಗೂ ಸುತ್ತಮುತ್ತಲು ಮತ್ತೆ ಗೋವಧೆ ಆಗದಂತೆ ನಿರಂತರ ಪೊಲೀಸ್ ನಿಗಾ ಇಡಲು ಕ್ರಮ ಕೈಗೊಳ್ಳಬೇಕು
7) ನಮಗೆ ಸಿಕ್ಕಿರುವ ಮಾಹಿತಿಯಂತೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವಾರು ಕಡೆ ಮಾಂಸದ ಅಂಗಡಿಯ ಲೈಸೆನ್ಸ್ ತೆಗೆದುಕೊಂಡು ದನದ ಮಾಂಸ ಮಾರಾಟ ಮಾಡಲಾಗುತ್ತಿದೆ ಇದರ ಮೇಲೆ ನಿಗಾ ಇಟ್ಟು ಅಲ್ಲಿಗೆ ಎಲ್ಲಿಂದ ಗೋಮಾಂಸ ಬರುತ್ತದೆ ಎಂದು ತನಿಖೆ ಮಾಡಿ ಗೋಮಾಂಸ ಸರಬರಾಜು ಮಾಡುವ ಅಕ್ರಮ ಕಸಾಯಿ ಖಾನೆಗಳನ್ನು ಗುರುತಿಸಿ ಅವುಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು.
8) ಹೋಟೆಲ್ ಗಳಲ್ಲಿ ಬೀಫ್ ಪದಾರ್ಥ ಸಿಗುತ್ತಿದ್ದು ಅವುಗಳನ್ನು ಗೋಮಾಂಸದಿಂದಲೇ ಮಾಡಿದೆಂದ ಹೇಳಲಾಗುತ್ತಿದ್ದು ಅವರಿಗೆ ಅಕ್ರಮಗೋಮಾಂಸ ಸರಬರಾಜು ಮಾಡುವವರ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
9) ಇದುವರೆಗೆ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಿರುವ ಕಸಾಯಿ ಖಾನೆಗಳ ಕಟ್ಟಡಗಳನ್ನೆಲ್ಲ ಮುಟ್ಟುಗೋಲು ಹಾಕಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ.
ಸುದ್ದಿಗೋಷ್ಠಿಯಲ್ಲಿ ಎಚ್ ಕೆ ಪುರುಷೋತ್ತಮ , ರವಿ ಅಸೈಗೋಳಿ,ನವೀನ್ ಮೂಡುಶೆಡ್ಡೆ ಉಪಸ್ಥಿತರಿದ್ದರು


Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
Inline Feedbacks
View all comments
wpDiscuz
0
0
Would love your thoughts, please comment.x
()
x
Exit mobile version