Home Mangalorean News Kannada News ದೀಪಕ್, ಬಶೀರ್ ಹತ್ಯೆ ಆರೋಪಿಗಳ ಪರ ವಾದಿಸದಂತೆ ವಕೀಲರ ಸಂಘಕ್ಕೆ ಮಿಥುನ್ ರೈ ಮನವಿ

ದೀಪಕ್, ಬಶೀರ್ ಹತ್ಯೆ ಆರೋಪಿಗಳ ಪರ ವಾದಿಸದಂತೆ ವಕೀಲರ ಸಂಘಕ್ಕೆ ಮಿಥುನ್ ರೈ ಮನವಿ

Spread the love

ದೀಪಕ್, ಬಶೀರ್ ಹತ್ಯೆ ಆರೋಪಿಗಳ ಪರ ವಾದಿಸದಂತೆ ವಕೀಲರ ಸಂಘಕ್ಕೆ ಮಿಥುನ್ ರೈ ಮನವಿ

ಮಂಗಳೂರು: ಕಾಟಿಪಳ್ಳದ ದೀಪಕ್ ರಾವ್ ಹಾಗೂ ಆಕಾಶಭವನದ ಬಶೀರ್ ಹತ್ಯೆ ಪ್ರಕರಣದಲ್ಲಿ ಪೋಲಿಸರಿಂದ ಬಂಧನಕ್ಕೊಳಗಾಗಿರುವ ಆರೋಪಿಗಳ ಪರ ಜಿಲ್ಲೆಯ ಯಾವುದೇ ವಕೀಲರು ವಕಾಲತ್ತು ನಡೆಸದಂತೆ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ವಕೀಲರ ಸಂಘಕ್ಕೆ ಮನವಿ ಮಾಡಲಾಗುವುದು ಎಂದು ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ತಿಳಿಸಿದರು.

ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಅವರು ಜಿಲ್ಲೆಯಲ್ಲಿ ನಡೆದ ಈ ಎರಡು ಹತ್ಯೆ ಪ್ರಕರಣಗಳು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಮತೀಯ ಶಕ್ತಿಗಳ ಜಿಲ್ಲೆಯ ಶಾಂತಿ ಸೌಹಾರ್ದಕ್ಕೆ ಧಕ್ಕೆ ತರುತ್ತಿದ್ದಾರೆ. ಇಬ್ಬರ ಹತ್ಯೆಯೂ ಅವರ ಮನೆಯವರಿಗೆ ತುಂಬಲಾರದ ನಷ್ಟವಾಗಿದ್ದು, ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

ಆರೋಪಿಗಳ ಪರ ಯಾರೂ ವಕಾಲತ್ತು ಮಾಡದಿರುವ ಮೂಲಕ ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬಹುದು. ಹೀಗಾಗಿ ನಾವು ವಕೀಲರ ಸಂಘಕ್ಕೆ ಮನವಿ ಮಾಡಲಿದ್ದೇವೆ. ಜತೆಗೆ ಆರೋಪಿಗಳಿಗೆ ಕುಮ್ಮಕ್ಕೂ ನೀಡಿದವರನ್ನೂ ಬಯಲಿಗೆಳೆಯಲು ಪೋಲಿಸ್ ಇಲಾಖೆಗೆ ಮನವಿ ಸಲ್ಲಿಸಲಿದ್ದೇವೆ ಎಂದರು.


Spread the love

Exit mobile version