ದ.ಕ.ಜಿಲ್ಲೆಯಲ್ಲಿ ಭಾರಿ ಮಳೆ ; ರಾಂಚಿ ಪ್ರವಾಸ ಮೊಟಕುಗೊಳಿಸಿದ ಸಂಸದ ನಳಿನ್

Spread the love

ದ.ಕ.ಜಿಲ್ಲೆಯಲ್ಲಿ ಭಾರಿ ಮಳೆ ; ರಾಂಚಿ ಪ್ರವಾಸ ಮೊಟಕುಗೊಳಿಸಿದ ಸಂಸದ ನಳಿನ್

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಭಾರಿ ಮಳೆ ಸುರಿದು ಜೀವ ಹಾನಿ ಹಾಗೂ ಆಸ್ತಿಪಾಸ್ತಿ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಸದ ನಳಿನ್‍ಕುಮಾರ್ ಕಟೀಲ್ಅವರು ತನ್ನ ರಾಂಚಿ ಪ್ರವಾಸವನ್ನು ಮೊಟಕುಗೊಳಿಸಿ ಶನಿವಾರ ರಾತ್ರಿ ಮಂಗಳೂರಿಗೆ ಮರಳಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಸಮಿತಿಯ ರಾಂಚಿ ಹಾಗೂ ಪಾಟ್ನಾ ಅಧ್ಯಯನ ಪ್ರವಾಸ ಜು.7ರಿಂದ 11ರವರೆಗೆ ನಿಗದಿಯಾಗಿತ್ತು. ಸಂಸದ ನಳಿನ್‍ಕುಮಾರ್ ಕೃಷಿ ಸಮಿತಿಯ ಸದಸ್ಯರಾಗಿದ್ದು ಈ ಅಧ್ಯಯನ ಪ್ರವಾಸಕ್ಕೆ ತೆರಳಿದ್ದರು. ಜಿಲ್ಲೆಯಲ್ಲಿ ಹೈ ಅಲರ್ಟ್ ಸ್ಥಿತಿ ಇರುವುದನ್ನು ಸಮಿತಿಗೆ ಮನವರಿಕೆ ಮಾಡಿರುವ ಸಂಸದರು ಜಿಲ್ಲೆಗೆ ಮರಳಿದ್ದಾರೆ.


Spread the love