ನಾಗರಪಂಚಮಿಯಂದು ನಾಗ ಪೂಜೆ ಮಾಡಬಾರದು ಎಂದು ಹೇಳಿಲ್ಲ, ಸಾರ್ವಜನಿಕ ಆಚರಣೆ ಇಲ್ಲ- ಸುಳ್ಳು ಸುದ್ದಿ ಹರಡುವವರ ವಿರುದ್ದ ಕ್ರಮ – ಡಿಸಿ ಜಗದೀಶ್

Spread the love

ನಾಗರಪಂಚಮಿಯಂದು ನಾಗ ಪೂಜೆ ಮಾಡಬಾರದು ಎಂದು ಹೇಳಿಲ್ಲ, ಸಾರ್ವಜನಿಕ ಆಚರಣೆ ಇಲ್ಲ- ಸುಳ್ಳು ಸುದ್ದಿ ಹರಡುವವರ ವಿರುದ್ದ ಕ್ರಮ – ಡಿಸಿ ಜಗದೀಶ್

ಉಡುಪಿ: ನಾಗರ ಪಂಚಮಿಯಂದು ನಾಗರ ಪೂಜೆ ಮಾಡಬಾರದು ಎಂದು ಡಿಸಿ ಅವರು ಹೇಳಿದ್ದಾರೆ ಎಂದು ತಪ್ಪು ಅಭಿಪ್ರಾಯದ ಮೆಸೇಜನ್ನು ಸಾರ್ವಜನಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾದಿಕಾರಿ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ನ ಈ ಸಂದರ್ಭದಲ್ಲಿ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡಬಾರದು, ಅವರವರ ಮನೆಯಲ್ಲಿ ನಾಗಪೂಜೆ ಮಾಡಲು ನಾಗರಪಂಚಮಿ ಆಚರಣೆ ಮಾಡಲು ಯಾರ ಅನುಮತಿಯ ಅಗತ್ಯವಿಲ್ಲ, ಸಾರ್ವಜನಿಕರು ಒಟ್ಟಿಗೆ ಸೇರಿ ಆಚರಣೆ ಮಾಡಲು ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟ ಪಡಿಸಿದ್ದಾರೆ.


Spread the love