ಪಶ್ಚಿಮ ವಲಯ ನೂತನ ಐಜಿಪಿಯಾಗಿ ಬೋರಲಿಂಗಯ್ಯ ಎಮ್ ಬಿ ನೇಮಕ

Spread the love

ಪಶ್ಚಿಮ ವಲಯ ನೂತನ ಐಜಿಪಿಯಾಗಿ ಬೋರಲಿಂಗಯ್ಯ ಎಮ್ ಬಿ ನೇಮಕ

ಮಂಗಳೂರು: ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.

ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡ, ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ವಲಯದ ನೂತನ ಐಜಿಪಿಯಾಗಿ 2008 ರ ಬ್ಯಾಚ್ ಅಧಿಕಾರಿ ಬೋರಲಿಂಗಯ್ಯ ಎಮ್ ಬಿ ಅವರನ್ನು ನೇಮಕ ಮಾಡಲಾಗಿದೆ.

ಬೋರಲಿಂಗಯ್ಯ ಎಮ್ ಬಿ ಅವರು ಸೌತ್ ರೇಂಜ್ ಮೈಸೂರಿನ ಐಜಿಪಿಯಾಗಿದ್ದು ಅವರ ಸ್ಥಾನಕ್ಕೆ ಅಮಿತ್ ಸಿಂಗ್ ಅವರನ್ನು ನೇಮಿಸಲಾಗಿದೆ.


Spread the love