ಪಾಣೆಮಂಗಳೂರು: ಎಟಿಎಂ ಕಳವಿಗೆ ವಿಫಲ ಯತ್ನ

Spread the love

ಪಾಣೆಮಂಗಳೂರು: ಎಟಿಎಂ ಕಳವಿಗೆ ವಿಫಲ ಯತ್ನ

ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ಪೇಟೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ವತಿಯಿಂದ ಅಳವಡಿಸಲಾದ ಎಟಿಎಂ ಯಂತ್ರಕ್ಕೆ ಕಬ್ಬಿಣದ ಸಲಾಕೆಯೊಂದರ ಮೂಲಕ ಹಾನಿಗೊಳಿಸಿ ನಗದು ಹಣ ಕಳವಿಗೆ ವಿಫಲ ಯತ್ನ ಗುರುವಾರ ಬೆಳಿಗ್ಗೆ ನಡೆದಿದೆ.

ಇಲ್ಲಿನ ಎಟಿಎಂ ಕೊಠಡಿಯಿಂದ ಸೈರನ್ ಮೊಳಗಿದ್ದು, ಸ್ಥಳೀಯ ನಿವಾಸಿ ಎನ್.ಸುಬ್ಬರಾವ್ ಎಂಬವರು ಕೂಡಲೇ ಬ್ಯಾಂಕಿನ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದರು. ಎಟಿಎಂ ಯಂತ್ರದ ಕೆಳಗಿನ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಸಿಸಿ ಟಿವಿ ಕ್ಯಾಮೆರಾ ಕೂಡಾ ಹಾನಿಗೊಂಡಿದೆ.

ಹೆಲ್ಮೆಟ್‌ ಧರಿಸಿದ್ದ ಅಪರಿಚಿತ ವ್ಯಕ್ತಿ ಎಟಿಎಂ ಯಂತ್ರದಿಂದ ಹಣ ಕಳವಿಗೆ ವಿಫಲ ಯತ್ನ ನಡೆಸಿರುವ ದೃಶ್ಯಾವಳಿ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.


Spread the love