Home Mangalorean News Kannada News ಪುತ್ತಿಗೆ ಪರ್ಯಾಯ  ಹಸಿರು ಹೊರೆ ಕಾಣಿಕೆ ಮನವಿ ಬಿಡುಗಡೆ 

ಪುತ್ತಿಗೆ ಪರ್ಯಾಯ  ಹಸಿರು ಹೊರೆ ಕಾಣಿಕೆ ಮನವಿ ಬಿಡುಗಡೆ 

Spread the love

ಪುತ್ತಿಗೆ ಪರ್ಯಾಯ  ಹಸಿರು ಹೊರೆ ಕಾಣಿಕೆ ಮನವಿ ಬಿಡುಗಡೆ 

ಪುತ್ತಿಗೆ ಪರ್ಯಾಯೋತ್ಸವದ ಸ್ವಾಗತ ಸಮಿತಿಯ ವಿಶೇಷ ಸಭೆಯು ಕಾರ್ಯಾಧ್ಯಕ್ಷರಾದ  ರಘುಪತಿ ಭಟ್ ರವರ ಅಧ್ಯಕ್ಷತೆಯಲ್ಲಿ ಆರ್ಥಿಕ, ಹೊರೆ ಕಾಣಿಕೆ, ಸಾಂಸ್ಕೃತಿಕ ಸಮಿತಿಗಳ ಕಾರ್ಯ ವೈಖರಿ ಬಗ್ಗೆ ಚರ್ಚೆ ನಡೆಯಿತು.

ಸಮಿತಿಯ ಮಹಾ ಪೋಷಕರಾದ ಉಡುಪಿ ಶಾಸಕರಾದ  ಯಶ್ಪಾಲ್ ಸುವರ್ಣ ರವರು ನವರಾತ್ರಿ ಸಂದರ್ಭದಲ್ಲಿ ಪುತ್ತಿಗೆ ಪರ್ಯಾಯಕ್ಕೆ ಧನ ಹಾಗೂ ಧಾನ್ಯ ಲಕ್ಷ್ಮಿಯ ಅನುಗ್ರಹ ಪ್ರವಾಹ ಹರಿದು ಅಕ್ಷಯ ಆಗಲಿ. ಶ್ರೀ ಕೃಷ್ಣ ಮುಖ್ಯಪ್ರಾಣ ರ ಸೇವೆಯನ್ನು ನಾವೆಲ್ಲರೂ ಒಟ್ಟಾಗಿ ಮಾಡೋಣ ಎಂದು ತಿಳಿಸಿ, ಹೊರೆ ಕಾಣಿಕೆಯ ಮನವಿಯನ್ನು ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಕಾಪು ಶಾಸಕರಾದ  ಸುರೇಶ್ ಶೆಟ್ಟಿ ಗುರ್ಮೆ, ಪ್ರಧಾನ ಕಾರ್ಯದರ್ಶಿ ಬೆಳಪು  ದೇವಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ  ರಂಜನ್ ಕಲ್ಕೂರ, ಸಂಚಾಲಕರಾದ  ಪ್ರಸಾದ್ರಾಜ್ ಕಾಂಚನ್, ಬೈಕಾಡಿ ಸುಪ್ರಸಾದ್ ಶೆಟ್ಟಿ,   ಜಯಕರ್ ಶೆಟ್ಟಿ ಇಂದ್ರಾಳಿ,  ಕಪ್ಪೆಟ್ಟು ಪ್ರವೀಣ್ ಶೆಟ್ಟಿ,   ದಿನೇಶ್ ಪುತ್ರನ್,  ಎಂ ಎಲ್ ಸಾಮಗ,  ಶ್ರೀಪತಿ ಭಟ್,  ಹೆಜಮಾಡಿ ದಯಾನಂದ ಬಂಗೇರ ,  ಗಣೇಶ್ ರಾವ್ , ಸಂತೋಷ್ ಶೆಟ್ಟಿ ತೆಂಕರಗುತ್ತು ,  ಮಟ್ಟಾರ್ ರತ್ನಾಕರ್ ಹೆಗ್ಡೆ ,  ಬಾಲಾಜಿ ಯೋಗೀಶ್ ಶೆಟ್ಟಿ , ಎಂ ಎಸ್ ವಿಷ್ಣು ಹಾಗೂ ಸದಸ್ಯರುಗಳಾದ  ಸುದರ್ಶನ್, ಶ್ರೀನಿವಾಸ್ ಯು ಕೆ, ಗುರುರಾಜ ಆಚಾರ್ಯ,  ವಿಷ್ಣುಮೂರ್ತಿ ಉಪಾಧ್ಯಾಯ  ರವೀಂದ್ರ ಆಚಾರ್ಯ ಉಪಸ್ಥಿತರಿದ್ದರು.   ಮಠದ ದಿವಾನರಾದ  ನಾಗರಾಜ ಆಚಾರ್ಯರು ಸ್ವಾಗತಿಸಿದರು  ರಮೇಶ ಭಟ್ ಕೆ. ಧನ್ಯವಾದ ನೀಡಿ ಕಾರ್ಯಕ್ರಮವನ್ನು ಸಂಯೋಜಿಸಿದರು.


Spread the love

Exit mobile version