Home Mangalorean News Kannada News ಪ್ರತಿಷ್ಠಿತ “ಶೇಖ್ ಹಮ್ದಾನ್ ಪ್ರಶಸ್ತಿ”  ಪುರಸ್ಕೃತೆ ಬಹುಮಖ ಪ್ರತಿಭೆಯ ಕು| ವಿಭಾಲಿ ಶೆಟ್ಟಿ

ಪ್ರತಿಷ್ಠಿತ “ಶೇಖ್ ಹಮ್ದಾನ್ ಪ್ರಶಸ್ತಿ”  ಪುರಸ್ಕೃತೆ ಬಹುಮಖ ಪ್ರತಿಭೆಯ ಕು| ವಿಭಾಲಿ ಶೆಟ್ಟಿ

Spread the love

ಪ್ರತಿಷ್ಠಿತ “ಶೇಖ್ ಹಮ್ದಾನ್ ಪ್ರಶಸ್ತಿ”  ಪುರಸ್ಕೃತೆ ಬಹುಮಖ ಪ್ರತಿಭೆಯ ಕು| ವಿಭಾಲಿ ಶೆಟ್ಟಿ

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಶೈಕ್ಷಣಿಕಕ್ಷೇತ್ರದಲ್ಲಿ ವಿದ್ಯಾರ್ಜನೆಯೊಂದಿಗೆಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಅಪ್ರತಿಮ ಸಾಧನೆ ಹಾಗೂ ವಿದ್ಯಾಕ್ಷೇತ್ರದಲ್ಲಿ ಹೊಸಕಲ್ಪನೆಯ ಅವಿಸ್ಕಾರವನ್ನು ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಿನಿಷ್ಟ್ರಿಆಫ್‍ಎಜುಕೇಶನ್‍ಯು.ಎ.ಇ. ಗುರುತ್ತಿಸಿ 1998 ರಿಂದ ಪ್ರಾರಂಭಿಸಲಾದ” ಹಮ್ದಾನ್ ಬಿನ್ ರಾಶೀದ್ ಅಲ್ ಮಕ್ತೂಮ್ ಪ್ರಶಸ್ತಿಯನ್ನು” ನೀಡುತ್ತಾ ಬರಲಾಗುತ್ತಿದೆ.ಯು.ಎ.ಇ.ಯಲ್ಲಿ ವಿವಿಧದೇಶದ 25 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ.

ಯು.ಎ.ಇ.ಯ ಶಾರ್ಜಾಅವರೊನ್‍ಇಂಗ್ಲಿಷ್ ಹೈ ಸ್ಕೂಲ್ ಬಾಲಕೀಯರ ವಿಭಾಗದ ವಿದ್ಯಾಸಂಸ್ಥೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ  ಕು| ವಿಭಾಲಿ ಶೆಟ್ಟಿ 29 ಏಪ್ರಿಲ್ 2018 ರಂದುಡೆಪ್ಯೂಟಿರೂಲರ್‍ಆಫ್‍ದುಬಾಯಿ ಗೌ| ಶೇಖ್ ಹಮ್ದಾನ್ ಬಿನ್ ರಾಶೀದ್ ಅಲ್ ಮಕ್ತೂಮ್‍ಇವರಿಂದ ಪರಿಷ್ಠಿತ”ಶೇಖ್ ಹಮ್ದಾನ್ ಪ್ರಶಸ್ತಿ”ಯನ್ನುದುಬಾಯಿಯಲ್ಲಿಟ್ರೇಡ್ ಸೆಂಟರ್ ಸಭಾಂಗಣದಲ್ಲಿವರ್ಣರಂಜಿತ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಡೆದುಕೊಂಡಿದ್ದಾಳೆ.

ಕು| ವಿಭಾಲಿ ಶೆಟ್ಟಿಯ ಶೈಕ್ಷಣಿಕಕ್ಷೇತ್ರದ ಸಾಧನೆಗಾಗಿ ಈ ಬಾರಿದುಬಾಯಿಜೆ. ಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ಸಭಾಂಗಣದಲ್ಲಿ ನಡೆದಯು.ಎ.ಇ. ಬಂಟ್ಸ್ 44ನೇ ಸ್ನೇಹಮಿಲನದಲ್ಲಿ ನೀಡಲಾಗುವ 2018ನೇ ಸಾಲಿನ “ಪ್ರತಿಭಾ ಪುರಸ್ಕಾರ” ವನ್ನು ಮಹಾಪೋಷಕರಾದಡಾ| ಬಿ. ಆರ್. ಶೆಟ್ಟಿಯವರಿಂದತನ್ನ ಪೋಷಕರ ಸಮ್ಮುಖದಲ್ಲಿ ಪಡೆದುಕೊಂಡಿದ್ದಾಳೆ.

ಕು| ವಿಭಾಲಿ ಶೆಟ್ಟಿ ಬೆಳೆದು ಬಂದ ಹಾದಿ…

ಕು| ವಿಭಾಲಿ ಶೆಟ್ಟಿ ಶಾರ್ಜಾದಲ್ಲಿರುವರಜಬ್‍ಟ್ರೇಡಿಂಗ್‍ಕಂಪೆನಿಯ ವ್ಯ್ವಸ್ಥಾಪಕ ಪಾಲುದಾರರಾಗಿರುವ ಶ್ರೀ ಪ್ರಸಾದ್ ಶೆಟ್ಟಿ ಹಾಗೂ ದುಬಾಯಿಯಲ್ಲಿ ಸೀಮಾಕ್ ಕನ್ಸಲ್ಟೆಂಟ್ ನಲ್ಲಿಡಿಸೈನ್ ಮ್ಯಾನೇಜರ್ ಮತ್ತು ಸೀನಿಯರ್ ಆರ್ಕಿಟೆಕ್ಟ್ ಶ್ರೀಮತಿ ಸುರಕ್ಷಾ ಪ್ರಸಾದ್ ಶೆಟ್ಟಿಯವರ ಪುತ್ರಿಯಾಗಿದ್ದಾಳೆ.

ಕು| ವಿಭಾಲಿ ಶೆಟ್ಟಿ ಶೈಕ್ಷಣಿಕವಾಗಿ ಭಾಗವಹಿಸುವ ಎಲ್ಲಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಳ್ಳುವ ಚಲವಂತೆ. ಪ್ರಸ್ತುತ ವಿದ್ಯಾಸಂಸ್ಥೆಯಲ್ಲಿ ಸ್ಕೂಲ್ ಪಾರ್ಲಿಮೇಂಟ್ ನ ಸದಸ್ಯೆಯಾಗಿಗೌರವದ ಸ್ಥಾನ ದೊರೆತಿದೆ.

ವಿಭಾಲಿ ಗೆ ವಿವಿಧ ರಸಪ್ರಸ್ನೆಗಳು ಮತ್ತುಯು.ಎ.ಇ. ಮಟ್ಟದಅಬ್ಯಾಕಸ್‍ಅಂಡ್ ಮೆಂಟಲ್‍ಅರ್ಥಮೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೋಲ್ಡ್ ಮೆಡಲ್ ಮತ್ತು ಸಿಲ್ವರ್ ಮೆಡಲ್ ಪಡೆದಿದ್ದಾಳೆ ಹಾಗೂ ಬೆಂಗಳೂರಿನಲ್ಲಿ ನಡೆದಕರ್ನಾಟಕ ಮಟ್ಟದಅಬ್ಯಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದಾಳೆ.

ದುಬಾಯಿಯಲ್ಲಿ ನಡೆಯುವ ವಿಶ್ವ ವಿಖ್ಯಾತ ಶಾಪಿಂಗ್‍ಪೆಸ್ಟಿವಲ್ ನ ಗ್ಲೋಬಲ್ ವಿಲೇಜ್ ನ ಇಂಡಿಯನ್ ಪೆವೆಲಿನ್ ನಲ್ಲಿ ನೃತ್ಯಕಾರ್ಯಕ್ರಮ ನೀಡಿದ್ದಾಳೆ. ‘ಸಾಂತ್ವನಂಯೂತ್ ಫೆಸ್ಟ್ 2016’ ನ ಜಾನಪದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ಚೆಸ್‍ಕ್ರೀಡೆಯಲ್ಲಿಯೂಎತ್ತಿದ ಕೈ ಜೊತೆಗೆಈಜುವುದರಲ್ಲಿತರಭೇತಿ ಪಡೆದಿದ್ದಾಳೆ, ಚಿತ್ರಕಲೆಯಲ್ಲಿಯೂ ಹಸ್ತಕೌಶಲ್ಯವನ್ನು ಹೊಂದಿರುವ ವಿಭಾಲಿ ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾಳೆ.

ವಿಭಾಲಿ  ಉತ್ತಮ ಎಳೆಯ ವಾಗ್ಮೀ, ಕಾವ್ಯ ವಾಚನದಲ್ಲಿಯೂ ವಿಶೇಷ ಪ್ರತಿಭೆಯನ್ನು ಹಲವಾರು ವೇದಿಕೆಗಳಲ್ಲಿ ಸಾಕ್ಷೀಕರಿಸಿದ್ದಾಳೆ.

“ಪರಿಸರ ಸಂರಕ್ಷಣ” ಮತ್ತು ಸೇವಾ ಮತ್ತುದಾನ ಕಾರ್ಯಗಳಲ್ಲಿಯೂ ವಿಭಾಲಿ ತನ್ನನ್ನುತಾನು ತೊಡಗಿಸಿಕೊಂಡು, “ಗ್ರೀನ್ ಹೋಪ್ – ಎನ್ವಿರಾನ್ಮೆಂಟಲ್‍ಗ್ರೂಪ್” ನ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.ವೇಸ್ಟ್‍ರಿಸೈಕ್ಲಿಂಗ್(ತ್ಯಾಜ ವಸ್ತುಗಳ ಮರುಬಳಕೆ) ಅಭಿಯಾನದಲ್ಲಿ ಭಾಗವಹಿಸಿಕೊಂಡು ಬರುತಿದ್ದಾಳೆ.ಎಮಿರೇಟ್ಸ್‍ಎನ್ವಿರನ್ಮೆಂಟಲ್‍ಗ್ರೂಪ್ ನ ಸದಸ್ಯತ್ವ ಪಡೆದಿದ್ದಾಳೆ

ಬಹುಮಖ ಪ್ರತಿಭೆಯ ಕು| ವಿಭಾಲಿ ಶೆಟ್ಟಿಯ ವಿವಿಧ ಚಟುವಟಿಕೆಗಳಲ್ಲಿ ತನ್ನ ಪ್ರತಿಭೆಯ ಮೂಲಕ ತನ್ನ ಪೋಷಕರಿಗೂ, ವಿದ್ಯಾಸಂಸ್ಥೆಗೂ ಹೆಸರು ಗಳಿಸಿರುವವುದನ್ನು ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಗೆ ಅಚ್ಚು ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಾಳೆ. ಎಳೆಯ ವಯಸ್ಸಿನಲ್ಲೇ ಬಹುಮುಖ ಪ್ರತಿಭೆಇರುವ ವಿಭಾಲಿಯ ಯಶಸ್ವಿ ಹೆಜ್ಜೆಗಳು ಶಾಘನೀಯವಾಗಿದೆ.

ವಿಭಾಲಿ ಶೆಟ್ಟಿಇನ್ನೂ ಹೆಚ್ಚಿನ ಸಾಧನೆಯ ಹಾದಿಯಲ್ಲಿ ಮುನ್ನಡೆಯಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.

ಬಿ. ಕೆ. ಗಣೇಶ್‍ರೈ – ಯು.ಎ.ಇ.


Spread the love

Exit mobile version