Home Mangalorean News Kannada News ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಶಾಸಕ ರಘುಪತಿ ಭಟ್ ಶಿಲನ್ಯಾಸ

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಶಾಸಕ ರಘುಪತಿ ಭಟ್ ಶಿಲನ್ಯಾಸ

Spread the love

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಶಾಸಕ ರಘುಪತಿ ಭಟ್ ಶಿಲನ್ಯಾಸ

ಉಡುಪಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗಲಿರುವ 500 ಮನೆಗಳ ಶಿಲನ್ಯಾಸ ಕಾರ್ಯಕ್ರಮವನ್ನು ಶಾಸಕ ಕೆ ರಘುಪತಿ ಭಟ್ ಇವರು ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ರಘುಪತಿ ಭಟ್ ಬಡತನವನ್ನು ಮೆಟ್ಟಿ ನಿಲ್ಲುವ ಉದ್ಧೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಈ ಯೋಜನೆಗೆ ಈಗ ಮತ್ತಷ್ಟು ಬಲ ಬಂದಿದೆ. ಸಮಾಜದ ಅತ್ಯಂತ ಕೆಳಗಿನ ವ್ಯಕ್ತಿಯೂ ಸೂರುವಂಚಿತರಾಗಬಾರದು ಎಂಬ ಮೋದಿಯವರ ಸಂಕಲ್ಪ ಈ ಮೂಲಕ ಸಾಕಾರಗೊಳ್ಳುತ್ತಿದೆ. ಶೀಘ್ರ ಉಡುಪಿಯಲ್ಲಿ 500 ಮನೆಗಳು ಬಡಜನತೆಗೆ ಸಿಗುವಂತಾಗಲಿದೆ ಎಂದು ಹೇಳಿದರು.

ಪಾಳೆಕಟ್ಟೆ ಕೊಡವೂರು ಮತ್ತು ಬಲರಾಮ್ ನಗರ ಕೊಳ ವಾರ್ಡ್ ನಲ್ಲಿ ನಡೆದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಕೊಡವೂರು ನಗರ ಸಭಾ ಸದಸ್ಯ ವಿಜಯ್ ಕೊಡವೂರು, ಕೊಳ ನಗರಸಭಾ ಸದಸ್ಯರಾದ ಲಕ್ಷ್ಮೀ ಮಂಜುನಾಥ್ ಕೊಳ,ಮಲ್ಪೆ ಸೆಂಟ್ರಲ್ ವಾರ್ಡ್ ನ ನಗರ ಸಭಾ ಸದಸ್ಯೆ ಹೆಡ್ಲಿನ್ ಕರ್ಕೆಡ , ಮೂಡುಬೆಟ್ಟು ನಗರ ಸಭಾ ಸದಸ್ಯ ಶ್ರೀಶ ಮೂಡುಬೆಟ್ಟು, ಕಲ್ಮಾಡಿ ನಗರ ಸಭಾ ಸದಸ್ಯ ಸುಂದರ್ ಕಲ್ಮಾಡಿ, ವಡಭಾಂಡೇಶ್ವರಿ ನಗರ ಸಭಾ ಸದಸ್ಯ ಯೋಗೀಶ್ ಸಾಲ್ಯಾನ್, 2 ಮನೆಯ ಫಲಾನುಭವಿಗಳು ಮತ್ತು ಪ್ರಮುಖರಾದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಪಾಂಡುರಂಗ ಮಲ್ಪೆ ,ಜೀವನ್, ರತ್ನಾಕರ್, ಮಂಜು ಕೊಳ, ಪ್ರಭಾತ್ ಹಾಗೂ ಗುತ್ತಿಗೆದಾರರು ಮತ್ತು 2 ವಾರ್ಡ್ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

Exit mobile version