Home Mangalorean News Kannada News ಫೇಸ್‌ಬುಕ್‌ನಲ್ಲಿ ಏಸು ಕ್ರಿಸ್ತರ ಅವಮಾನ: ಯುವ ಕಾಂಗ್ರೆಸ್ ಮತ್ತು ಕ್ರೈಸ್ತರಿಂದ ಪೊಲೀಸ್ ದೂರು

ಫೇಸ್‌ಬುಕ್‌ನಲ್ಲಿ ಏಸು ಕ್ರಿಸ್ತರ ಅವಮಾನ: ಯುವ ಕಾಂಗ್ರೆಸ್ ಮತ್ತು ಕ್ರೈಸ್ತರಿಂದ ಪೊಲೀಸ್ ದೂರು

Spread the love

ಫೇಸ್‌ಬುಕ್‌ನಲ್ಲಿ ಏಸು ಕ್ರಿಸ್ತರ ಅವಮಾನ: ಯುವ ಕಾಂಗ್ರೆಸ್ ಮತ್ತು ಕ್ರೈಸ್ತರಿಂದ ಪೊಲೀಸ್ ದೂರು

ಮಂಗಳೂರು: ಮದರ್ ತೆರೆಸಾ ಹಾಗೂ ಏಸು ಕ್ರಿಸ್ತರ ಬಗ್ಗೆ ಫೇಸ್‌ಬುಕ್ ಮಾಧ್ಯಮದಲ್ಲಿ ನಿಂದನಾತ್ಮಕ ಬರಹ ಪ್ರಕಟಿಸಿದ ವ್ಯಕ್ತಿಯ ವಿರುದ್ಧ ಯುವ ಕಾಂಗ್ರೆಸ್ ಮುಂದಾಳತ್ವದಲ್ಲಿ ಕ್ರೈಸ್ತ ಸಮುದಾಯ ಪೊಲೀಸ್ ದೂರು ನೀಡಿದೆ.

ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮುಂದಾಳತ್ವದಲ್ಲಿ ಪೊಲೀಸ್ ಕಮಿಷನರ್ ಟಿ.ಸುರೇಶ್ ಅವರನ್ನು ಭೇಟಿಯಾಗಿ ಈ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಯಿತು.

ಇಂಥ ನಿಂದನಾತ್ಮಕ ಬರಹಗಳ ಮೂಲಕ ಕೆಲವರು ಸಮಾಜದ ಸೌಹಾರ್ದವನ್ನು ಕದಡಲು ಯತ್ನಿಸುತ್ತಿದ್ದಾರೆ. ಇಂಥ ಬರಹಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ನಾವು ಆಗ್ರಹಿಸುತ್ತೇವೆ.

ಈ ಪ್ರಕರಣದಲ್ಲಿ ಏಸು ಕ್ರಿಸ್ತರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಬರೆದು ಕ್ರೈಸ್ತರ ಭಾವನೆಗಳಿಗೆ ಘಾಸಿ ಮಾಡಿದ ಅಕ್ಷರ ಬೊಳಿಯಮಜಲು ಎಂಬವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮಿಥುನ್ ರೈ ಒತ್ತಾಯಿಸಿದರು.


Spread the love

Exit mobile version