Home Mangalorean News Kannada News ಬಜ್ಪೆಯಲ್ಲಿ ಮೂವರು ಯುವಕರ ಮೇಲೆ ತಂಡದಿಂದ ಹಲ್ಲೆ; ಓರ್ವ ಮೃತ್ಯು – 5 ಆರೋಪಿಗಳ ಬಂಧನ

ಬಜ್ಪೆಯಲ್ಲಿ ಮೂವರು ಯುವಕರ ಮೇಲೆ ತಂಡದಿಂದ ಹಲ್ಲೆ; ಓರ್ವ ಮೃತ್ಯು – 5 ಆರೋಪಿಗಳ ಬಂಧನ

Spread the love

ಬಜ್ಪೆಯಲ್ಲಿ ಮೂವರು ಯುವಕರ ಮೇಲೆ ತಂಡದಿಂದ ಹಲ್ಲೆ; ಓರ್ವ ಮೃತ್ಯು – 5 ಆರೋಪಿಗಳ ಬಂಧನ

ಬಜ್ಪೆ : ತಂಡವೊಂದು ಮೂವರು ಯುವಕರ ಮೇಲೆ ದಾಳಿ ನಡೆಸಿ ಓರ್ವ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಟೀಲು ಸಮೀಪದ ದೇವರಗುಡ್ಡೆ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.

ಮೇ 31 ರಂದು ರಾತ್ರಿ 7.45 ಕ್ಕೆ ಬಜಪೆ ಪೊಲೀಸ್ ಠಾಣಾ ಸರಹದ್ದಿನ ಬಡಗ ಎಕ್ಕಾರು ಗ್ರಾಮದ ದೇವರ ಗುಡ್ಡೆ ಎಂಬಲ್ಲಿಗೆ ಬಂದ ದೀಪೇಶ್, ಸುಹಾಸ್, ಗೌತಮ್ ಉಮಾನಾಥ, ಪ್ರಶಾಂತ್ ಮತ್ತು ಇತರ 3-4 ಜನರು, ಒಂದು ಕ್ಷುಲ್ಲಕ ವಿಚಾರವಾಗಿ ದೀಪೇಶ ಎಂಬವನಲ್ಲಿ ಈ ಹಿಂದೆ ನಿತಿನ್ ಪೂಜಾರಿ ಮನೀಶ್ ಜೋಗಿ, ಮತ್ತು ಕೀರ್ತಿ ಎಂಬವರು ಕೇಳಿದರೆಂಬ ದ್ವೇಷದಿಂದ ಅವರಲ್ಲಿ ಜಗಳವಾಡಿ ಮರದ ದೊಣ್ಣೆ, ಕಬ್ಬಿಣದ ಸರಳು ಮತ್ತು ಚೂರಿಯಿಂದ ಹಲ್ಲೆ ನಡೆಸಿದ ಪರಿಣಾಮ ಗಂಭೀರ ಸ್ವರೂಪದ ಗಾಯಗೊಂಡು ಕೀರ್ತಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದು ಗಾಯಗೊಂಡ ಮನೀಶ್ ಜೋಗಿ ಮತ್ತು ನಿತಿನ್ ಪೂಜಾರಿ ಎಜೆ ಆಸ್ಪತ್ರೆಗೆ ದಾಕಲಾಗಿದೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಕೊಲೆ, ಕೊಲೆಯತ್ನ ಮತ್ತು ಹಲ್ಲೆಯ ಪ್ರಕರಣ ದಾಖಲಾಗಿದೆ.

ಈ ಪ್ರಕರಣದ ತನಿಖೆಯ ವೇಳೆ ಬಜಪೆ ಪೊಲೀಸ್ ಠಾಣಾ ಪೊಲೀಸರು ಮತ್ತು ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹದಳದವರು ಈ ಪ್ರಕರಣದ ಆರೋಪಿಗಳಾದ ದಿಪೇಶ್, ಸುಹಾಸ್ ಶೆಟ್ಟಿ, ಪ್ರಶಾಂತ್ ಯಾನೆ ಪಚ್ಚು ಮೋಕ್ಷಿತ್ ಮತ್ತು ಧನರಾಜ್ ಎಂಬವರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಿಸಿದ ವಾಹನಗಳನ್ನು ವಶಪಡಿಸಿಕೊಂಡದ್ದು ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.


Spread the love

Exit mobile version