ಬಜ್ಪೆ; ಯುವಕನ ಕೊಲೆ ಯತ್ನ ಇಬ್ಬರ ಬಂಧನ

Spread the love

ಬಜ್ಪೆ; ಯುವಕನ ಕೊಲೆ ಯತ್ನ ಇಬ್ಬರ ಬಂಧನ

ಮಂಗಳೂರು: ಬಜ್ಪೆ ಮೊಹಮ್ಮದ್ ಉಬೆದುಲ್ಲಾ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಪಡುಪೆರಾರ ನಿವಾಸಿ ಸುದರ್ಶನ್ ಎಸ್ @ಸುಧಾ(24) ಮತ್ತು ಪೆರ್ಮುದೆ ನಿವಾಸೆ ಜೀವನ್ (19) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 29 ರಂದು ಮೊಹಮ್ಮದ್ ಉಬೈದುಲ್ಲಾ ಎಂಬವರು ಮಂಗಳೂರು ತಾಲೂಕು, ಪಡುಪೆರಾರ ಗ್ರಾಮದ, ಭಟ್ರಕೆರೆ ಪಡೀಲ್ ಎಂಬಲ್ಲಿರುವ ತನ್ನ ಜನರಲ್ ಸ್ಟೋರ್ ಅಂಗಡಿಯಲ್ಲಿದ್ದ ಸಮಯ ಸುಮಾರು ಸಂಜೆ 4:50 ಗಂಟೆಗೆ ಬೈಕಿನಲ್ಲಿ ಬಂದ ಇಬ್ಬರು ಯುವಕರು ಮಾರಕಾಯುಧದಿಂದ ಮರಣಾಂತಿಕ ಹಲ್ಲೆಯನ್ನು ನಡೆಸಿದ್ದು, ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ  ಅ.ಕ್ರ. 299/2018 ಯಂತೆ ಪ್ರಕರಣ ದಾಖಲಾಗಿತ್ತು.

 ಪ್ರಕರಣದ ಆರೋಪಿಗಳ ಪತ್ತೆಯಲ್ಲಿರುವ ಸಮಯ ಬಂದ ಖಚಿತ ಮಾಹಿತಿಯಂತೆ  ಈ ಕೆಳಕಂಡ ಆರೋಪಿಗಳನ್ನು  ದಸ್ತಗಿರಿ ಮಾಡಲಾಗಿದ್ದು, ಸದ್ರಿ ಆರೋಪಿಗಳನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಈ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರಾದ  ಟಿ .ಆರ್. ಸುರೇಶ್ರವರ  ಆದೇಶದಂತೆ ಉಪಪೊಲೀಸ್ ಆಯುಕ್ತರಾದ ಹನುಮಂತರಾಯ (ಕಾ&ಸು),  ಉಮಾಪ್ರಶಾಂತ್ (ಅ&ಸಂ) ರವರ ಹಾಗೂ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ.ಎಸ್. ರವರ ನಿರ್ದೇಶದಂತೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸ್  ನಿರೀಕ್ಷಕರಾದ  ಎಸ್. ಪರಶಿವಮೂರ್ತಿ, ಪೊಲೀಸ್ ಉಪ ನಿರೀಕ್ಷಕರಾದ  ಶಂಕರ ನಾಯರಿ, ಸಿಬ್ಬಂದಿಗಳಾದ ಪ್ರಕಾಶ್ ಮೂರ್ತಿ,  ಚಂದ್ರಮೋಹನ್, ರಾಜೇಶ್,  ಪ್ರೇಮಾನಂದ,  ಶಶಿಧರ, ಭರತ್ ರವರು ಭಾಗ ವಹಿಸಿರುತ್ತಾರೆ


Spread the love