ಬಬ್ಬುಕಟ್ಟೆ ಹೊಂಡಮಯ ರಸ್ತೆ: ಸ್ಪೀಕರ್ ಖಾದರ್ ಅವರೇ ದುರಸ್ತಿ ಕಾರ್ಯ ಯಾವಾಗ?’ ಭಿತ್ತಿಪತ್ರ ಅಂಟಿಸಿದ ಡಿವೈಎಫ್ ಐ

Spread the love

ಬಬ್ಬುಕಟ್ಟೆ ಹೊಂಡಮಯ ರಸ್ತೆ: ಸ್ಪೀಕರ್ ಖಾದರ್ ಅವರೇ ದುರಸ್ತಿ ಕಾರ್ಯ ಯಾವಾಗ?’ ಭಿತ್ತಿಪತ್ರ ಅಂಟಿಸಿದ ಡಿವೈಎಫ್ ಐ

ಉಳ್ಳಾಲ: ತೊಕ್ಕೊಟ್ಟು – ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ಬಬ್ಬುಕಟ್ಟೆ ಪ್ರದೇಶದಲ್ಲಿ ಹೊಂಡಗಳಿಂದ ಕೂಡಿರುವ ರಸ್ತೆಯ ದುರಸ್ತಿ ಕಾರ್ಯಕ್ಕೆ ಆಗ್ರಹಿಸಿ ‘ ಸ್ಪೀಕರ್ ಖಾದರ್ ಅವರೇ ದುರಸ್ತಿ ಕಾರ್ಯ ಯಾವಾಗ?’ ಬರೆದಿರುವ ಭಿತ್ತಿಪತ್ರವನ್ನು ರಸ್ತೆಯಲ್ಲಿಟ್ಟಿರುವ ಬ್ಯಾರಿಕೇಡ್ ಗೆ ಅಂಟಿಸಿ ದುರಸ್ತಿಗೆ ಆಗ್ರಹಿಸಿದ್ದಾರೆ.

ತೊಕ್ಕೊಟ್ಟು- ಮಂಗಳೂರು ವಿ.ವಿ ರಸ್ತೆಯ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕೆಲವೆಡೆ ಸಮರ್ಪಕ ಚರಂಡಿ ವ್ಯವಸ್ಥೆಗಳಿಲ್ಲದೆ ರಸ್ತೆಗಳು ಹೊಂಡಮಯವಾಗಿದೆ. ಬಬ್ಬುಕಟ್ಟೆ ಪ್ರದೇಶದಲ್ಲಿ ನೀರು ಹರಿದು ರಸ್ತೆಯಿಡೀ ಹೊಂಡಮಯವಾಗಿದೆ. ಮಳೆಗಾಲ ಮುಗಿದರೂ ಹೊಂಡ ಮುಚ್ಚುವ ಕಾರ್ಯಕ್ಕೆ ಗುತ್ತಿಗೆದಾರರು ಮುಂದಾಗಿಲ್ಲ. ಒಂದು ವರ್ಷದೊಳಗೆ ರಸ್ತೆ ಹದಗೆಟ್ಟಿರುವುದರ ಹಿಂದೆ ಎಷ್ಟು ಭ್ರಷ್ಟಾಚಾರ ನಡೆದಿದೆ ಅನ್ನುವುದನ್ನು ಭಿತ್ತಿಪತ್ರದಲ್ಲಿ ಬರೆದು ರಸ್ತೆಬದಿ ಇರಿಸಲಾಗಿದೆ.


Spread the love