Home Mangalorean News Kannada News ಬಿಜೈ ಚರ್ಚ್ ಆವರಣದಲ್ಲಿ ದಿ. ಜಾರ್ಜ್ ಫೆರ್ನಾಂಡಿಸ್ ಚಿತಾಭಸ್ಮದ ಸ್ಮಾರಕ ಲೋಕಾರ್ಪಣೆ

ಬಿಜೈ ಚರ್ಚ್ ಆವರಣದಲ್ಲಿ ದಿ. ಜಾರ್ಜ್ ಫೆರ್ನಾಂಡಿಸ್ ಚಿತಾಭಸ್ಮದ ಸ್ಮಾರಕ ಲೋಕಾರ್ಪಣೆ

Spread the love
RedditLinkedinYoutubeEmailFacebook MessengerTelegramWhatsapp

ಬಿಜೈ ಚರ್ಚ್ ಆವರಣದಲ್ಲಿ ದಿ. ಜಾರ್ಜ್ ಫೆರ್ನಾಂಡಿಸ್ ಚಿತಾಭಸ್ಮದ ಸ್ಮಾರಕ ಲೋಕಾರ್ಪಣೆ

ಮಂಗಳೂರು : ಕೇಂದ್ರದ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಚಿತಾಭಸ್ಮದ ಸ್ಮಾರಕ ಲೋಕಾರ್ಪಣೆ ಅವರ ಹುಟ್ಟೂರಾದ ಬಿಜೈ ಚರ್ಚ್ ಆವರಣದಲ್ಲಿ ರವಿವಾರ ಬೆಳಗ್ಗೆ ನೆರವೇರಿತು. ಜಾರ್ಜ್ ಫೆರ್ನಾಂಡಿಸ್ರ ಕುಟುಂಬಸ್ಥರ ಸಮ್ಮುಖದಲ್ಲಿ ಮಂಗಳೂರು ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಲ್ದಾನ ಅವರು ಸ್ಮಾರಕ ಲೋಕಾರ್ಪಣೆಗೊಳಿಸಿ, ಆಶೀರ್ವಚನ ನೀಡಿದರು.

ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಕಳೆದ ವರ್ಷ ಜನವರಿ ತಿಂಗಳಿನಲ್ಲಿ ವಿಧಿವಶರಾಗಿದ್ದರು. 88 ವರ್ಷದ ಜಾರ್ಜ್ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆದಿತ್ತು, ಅಲ್ಲಿಂದ ಚಿತಾಭಸ್ಮ ತಂದು ಮಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ, ಚರ್ಚ್ ಪಾಲನಾ ಮಂಡಳಿಯ ಅಧ್ಯಕ್ಷ ವಿನ್ಸೆಂಟ್ ಡಿಸೋಜ, ಬಿಜೈ ಚರ್ಚ್ ಪ್ರಧಾನ ಧರ್ಮಗುರು ವಿಲ್ಸನ್ ವೈಟಸ್ ಡಿಸೋಜ, ಸಹಾಯಕ ಧರ್ಮಗುರು ಪ್ರಮೋದ್ ಕ್ರಾಸ್ತ, ಪಾಲನಾ ಮಂಡಳಿ ಉಪಾಧ್ಯಕ್ಷ ಫ್ರಾನ್ಸಿಸ್ ಅಶೋಕ್ ಪಿಂಟೊ, ಕಾರ್ಯದರ್ಶಿ ಪ್ರೀತಿ ಗೋಮ್ಸ್ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version