ಬಿಸಿಲಿನ ಝಳ ತಾಳಲಾರದೆ ದುಬೈಯಲ್ಲಿ ಕುಂದಾಪುರದ ಯುವಕ ಸಾವು

Spread the love

ಬಿಸಿಲಿನ ಝಳ ತಾಳಲಾರದೆ ದುಬೈಯಲ್ಲಿ ಕುಂದಾಪುರದ ಯುವಕ ಸಾವು

ಕುಂದಾಪುರ: ದುಬಾೖ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕುಂದಾಪುರದ ಮೂಲದ ಯುವಕನೋರ್ವ ಬಿಸಿಲಿನ ತಾಪ ತಾಳಲಾರದೆ ಭಾನುವಾರ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ಮೃತಪಟ್ಟ ಯುವಕನನ್ನು ಕುಂದಾಪುರದ ವಿಠಲವಾಡಿ ನಿವಾಸಿ, ಪ್ರಸ್ತುತ ಯು.ಎ.ಇ ಸೈಂಟ್ ಮೆರೀಸ್ ಚರ್ಚ್ ಬಳಿಯ ನಿವಾಸಿ ಎಲಿಯಾಸ್ ಸಿರಿಲ್ ಡಿಸೋಜಾ ಮತ್ತು ಪ್ರಮೀಳಾ ಡಿಸೋಜಾ ದಂಪತಿಗಳ ಪುತ್ರ ಶಾನ್ ಡಿಸೋಜಾ (19) ಎಂದು ಗುರುತಿಸಲಾಗಿದೆ.

ಮೂಲತ: ಮೂಡಬಿದರೆ ಹೊಸಬೆಟ್ಟುವಿನವರಾದ ತಂದೆ ಎಲಿಯಾಸ್ ಯುಎಇ ನಲ್ಲಿ ಖಾಸಗಿ ಕಂಪೆನಿಯಲ್ಲಿ ವ್ಯವಸ್ಥಾಪಕರಾಗಿ ಹಾಗೂ ತಾಯಿ ಪ್ರಮೀಳಾ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ಅವರೊಂದಿಗೆ ಇದ್ದ ಪುತ್ರ ಶಾನ್ ಅಲ್ಲಿಯೇ ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿದ್ದರು. ದುಬಾೖಯಿಂದ ಸುಮಾರು 115 ಕಿ.ಮೀ. ದೂರದಲ್ಲಿರುವ ರಾಸ್ ಅಲ್ ಖೈಮಾದಲ್ಲಿ ಈ ಘಟನೆ ನಡೆದಿದೆ. ತೀವೃವಾದ ಬಿಸಲಿನ ತಾಪಕ್ಕೆ ಒಳಗಾಗಿದ್ದ ಅವರನ್ನು ಸ್ಥಳೀಯ ಆರ್ಎಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರಾದರೂ ಅದು ಫಲಕಾರಿಯಾಗಲಿಲ್ಲ.

ಮೃತರಿಗೆ ತಂದೆ, ತಾಯಿ ಹಾಗೂ ಇಬ್ಬರು ಸಹೋದರರಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments