Home Mangalorean News Kannada News ಬೆಳ್ತಂಗಡಿಯಲ್ಲಿ ಬೈಕ್ – ಜೀಪು ಡಿಕ್ಕಿ : ಸವಾರ ಮೃತ್ಯು

ಬೆಳ್ತಂಗಡಿಯಲ್ಲಿ ಬೈಕ್ – ಜೀಪು ಡಿಕ್ಕಿ : ಸವಾರ ಮೃತ್ಯು

Spread the love

ಬೆಳ್ತಂಗಡಿಯಲ್ಲಿ ಬೈಕ್ – ಜೀಪು ಡಿಕ್ಕಿ : ಸವಾರ ಮೃತ್ಯು

ಬೆಳ್ತಂಗಡಿ: ಜೀಪು ಮತ್ತು ಬೈಕ್ ನಡುವೆ ನಡೆದ ಅಫಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಭಾನುವಾರ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮಿಪದ ಕೊರಂಜ ಶಾಲೆಯ ಬಳಿ ನಡೆದಿದೆ.

accident-gerukatte

ಮೃತರನ್ನು ಬಂಟ್ವಾಳ ತಾಲೂಕಿನ ಪೆರ್ನೆ ಬಿಳಿಯೂರು ಬಾನೊಟ್ಟು ನಿವಾಸಿ ಅಬೂಬಕ್ಕರ್ ಅವರ ಪುತ್ತ ಸರಫುದ್ಧೀನ್ (26) ಎಂದು ಗುರುತಿಸಲಾಗಿದೆ.

ಗುರುವಾಯನಕೆರೆಯಿಂದ ಉಪ್ಪಿನಂಗಡಿ ಕಡೆಗೆ ಸರಫೂದ್ದೀನ್ ಅವರ ತಮ್ಮ ಬೈಕಿನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಜೀಪು ಅತೀಯಾದ ವೇಗದಲ್ಲಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ, ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತರಾಗಿದ್ದಾರೆ. ಸರಫುದ್ದೀನ್ ಅವರು ಎರಡು ದಿನಗಳ ಹಿಂದೆ ವಿದೇಶದಿಂದ ಬಂದಿದ್ದರು ಎನ್ನಲಾಗಿದೆ.

ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version