ಬೈಂದೂರಿನ ದಂಪತಿಗೆ ಪ್ರಧಾನಿ ಮೋದಿ ಕಚೇರಿಯಿಂದ ಬುಲಾವ್!

Spread the love

ಬೈಂದೂರಿನ ದಂಪತಿಗೆ ಪ್ರಧಾನಿ ಮೋದಿ ಕಚೇರಿಯಿಂದ ಬುಲಾವ್!

  • ಹನಿಮೂನ್ ಬದಲು ಬೀಚ್ ಸ್ವಚ್ಛಗೊಳಿಸಿದ ದಂಪತಿಗೆ ಗಣರಾಜ್ಯೋತ್ಸವಕ್ಕೆ ಆಹ್ವಾನ

ಕುಂದಾಪುರ: ಮದುವೆಯಾಗಿ ಹನಿಮೂನ್ ತೆರಳುವ ಬದಲು ತಮ್ಮೂರಿನ ಬೀಚ್ ಸ್ವಚ್ಛಗಳಿಸಿ ಸುದ್ದಿಯಾದ ಬೈಂದೂರಿನ ದಂಪತಿಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಕಚೇರಿಯಿಂದ ಬುಲಾವ್ ಬಂದಿದೆ.

ಬೈಂದೂರಿನ ಕಳವಾಡಿ ದಂಪತಿಗಳಾದ ಅನುದೀಪ್ ಹಾಗೂ ಮಿನುಷಾ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದಾರೆ.

ಈ ಜೋಡಿ ಮದುವೆಯಾಗಿ ಹನಿಮೂನ್ ಗೆ ಹೋಗುವ ಬದಲು ಬೈಂದೂರಿನ ಹೆಸರಾಂತ ಸೋಮೇಶ್ವರ ಬೀಚ್ ಸ್ವಚ್ಚಗೊಳಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಅಲ್ಲದೇ ಪ್ರಧಾನ ಮಂತ್ರಿಯವರು ಮನ್ ಕೀ ಬಾತ್ ನಲ್ಲೂ ಈ ಜೋಡಿಯನ್ನು ಶ್ಲಾಘಿಸಿದ್ದರು.

ಬೀಚ್ ಸ್ವಚ್ಛಗೊಳಿಸಿ ಸುದ್ದಿ ಮಾಡಿರುವ ಅನುದೀಪ್ ಹೆಗ್ಡೆ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್. ಮಿನುಷಾ ಫಾರ್ಮಾಸಿಟಿಕಲ್ ಉದ್ಯೋಗಿ. ಪ್ರಕೃತಿ ಪ್ರಿಯರಾಗಿರುವ ಈ ದಂಪತಿ ಬೈಂದೂರು ಸಮೀಪದ ಸೋಮೇಶ್ವರ ಬೀಚ್ ನಲ್ಲಿ 8 ದಿನಗಳ ಕಾಲ ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಸಾಮಾಜಿಕ ಕಳಕಳಿ ಮೆರೆದಿದ್ದರು.


Spread the love