Home Mangalorean News Kannada News ಬೋಳಿಯಾರ್ : ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚೂರಿ ಇರಿತ

ಬೋಳಿಯಾರ್ : ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚೂರಿ ಇರಿತ

Spread the love

ಬೋಳಿಯಾರ್ : ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚೂರಿ ಇರಿತ

ಕೊಣಾಜೆ : ವಿಜಯೋತ್ಸವ ಮುಗಿಸಿ ಬೈಕ್ ನಲ್ಲಿ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತ ಇನೋಳಿ ಧರ್ಮನಗರ ನಿವಾಸಿ ಹರೀಶ್ (35) ಹಾಗೂ ಅವರ ಭಾವ ವಿನೋದ್ (40) ಎಂಬವರ ಮೇಲೆ ಚೂರಿಯಿಂದ ಇರಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಸಮೀಪ ಇಂದು ತಡರಾತ್ರಿ ವೇಳೆ ಸಂಭವಿಸಿದೆ.

ಬೋಳಿಯಾರು ಬಿಜೆಪಿ ಗ್ರಾಮಸಮಿತಿ ವತಿಯಿಂದ ಬೋಳಿಯಾರಿನಿಂದ ಧರ್ಮನಗರದವರೆಗೆ ಸಂಸದರಾಗಿ ಆಯ್ಕೆಗೊಂಡ ಬ್ರಿಜೇಶ್ ಚೌಟ ಅವರ ವಿಜಯೋತ್ಸವ ರ್ಯಾಲಿ ಆಯೋಜಿಸಲಾಗಿತ್ತು. ಈ ಸಂದರ್ಭ ಬೋಳಿಯಾರು ಮಸೀದಿ ಸಮೀಪ ಬೈಕ್ ಸೀಟಿಗೆ ಬಡಿದು ವಿಜಯೋತ್ಸವ ಘೋಷಣೆಗಳನ್ನು ಬಿಜೆಪಿ ಕಾರ್ಯಕರ್ತರು ಕೂಗಿದ್ದರೆನ್ನಲಾಗಿದೆ. ನಂತರ ವಿಜಯೋತ್ಸವ ಮುಗಿಸಿ ಬೈಕಿನಲ್ಲಿ ಹರೀಶ್ , ವಿನೋದ್ ಸೇರಿ ಮೂವರು ಬೋಳಿಯಾರಿನತ್ತ ಬೈಕಿನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ತಂಡವೊಂದು ಹರೀಶ್ ಮತ್ತು ವಿನೋದ್ ಗೆ ಚೂರಿಯಿಂದ ಇರಿದಿದೆ. ಇನ್ನೋರ್ವನ ಮೇಲೆ ಹಲ್ಲೆಗೆ ಮುಂದಾದಾಗ ಎರಡು ತಂಡಗಳ ಮಧ್ಯೆ ಗಲಾಟೆ ನಡೆದಿದೆ. ತಕ್ಷಣ ಕೃತ್ಯ ಎಸಗಿದ ತಂಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಗಾಯಾಳು ಹರೀಶ್ ಮತ್ತು ವಿನೋದ್ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬೋಳಿಯಾರು ನಿವಾಸಿ ಪಿಕಪ್ ಚಾಲಕ ಕೃತ್ಯ ಎಸಗಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳಿಗೆ ಶೋಧ ಕಾರ್ಯ ಪೊಲೀಸರು ಮುಂದುವರಿಸಿದ್ದಾರೆ. ಹರೀಶ್ ಪೂಜಾರಿ ಧರ್ಮನಗರದಲ್ಲಿ ನೋವಿತ್ ಫರ್ನಿಚರ್ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.


Spread the love

Exit mobile version