ಮಂಗಳೂರು:  ಈಜುಕೊಳದಲ್ಲಿ ಮುಳುಗಿ ಹರ್ಯಾಣದ ಯುವಕ ಮೃತ್ಯು

Spread the love

ಮಂಗಳೂರು:  ಈಜುಕೊಳದಲ್ಲಿ ಮುಳುಗಿ ಹರ್ಯಾಣದ ಯುವಕ ಮೃತ್ಯು

ಮಂಗಳೂರು: ನಗರದ ಮಂಗಳಾ ಈಜುಕೊಳದಲ್ಲಿ ಮಂಗಳವಾರ ಯುವಕನೊಬ್ಬ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಮೃತ ಯುವಕನನ್ನುಅಭಿಷೇಕ್ ಆನಂದ್ (30) ಎಂದು ಗುರುತಿಸಲಾಗಿದೆ. ಈತ ಹರಿಯಾಣದ ಗುರ್ಗಾಂವ್ ನಿವಾಸಿ ಎಂದು ತಿಳಿದು ಬಂದಿದೆ.

ಮಂಗಳವಾರ ಸಂಜೆ 4.45 ರಿಂದ 5 ಗಂಟೆಯ ನಡುವೆ ಅಭಿಷೇಕ್ ಆನಂದ್ ಈಜಲು ಆಗಮಿಸಿದ್ದು,ಈ ಘಟನೆ ನಡೆದಿದೆ.

ಈಜುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನಂತರ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


Spread the love