Home Mangalorean News Kannada News ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ

Spread the love

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮುಂದಿನ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ. ಭರತ್ ಶೆಟ್ಟಿಯವರಿಗೆ ಮನವಿ ನೀಡಲಾಯಿತು.

ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ 23 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ಪ್ರಕರಣ ರಾಷ್ಟ್ರವ್ಯಾಪಿ ಸುದ್ಧಿಯಾಗಿತ್ತು. ಇದರಲ್ಲಿ ಕಾಂಗ್ರೆಸ್ ಸರ್ಕಾರವು ಈ ಬೀಕರ ಹತ್ಯೆಗಳ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ, ತಪ್ಪಿತಸ್ತರಿಗೆ ಸೂಕ್ತ ಶಿಕ್ಷೆ ನೀಡುವುದು ಅಪೇಕ್ಷಿತವಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಈ ಪ್ರಕರಣದಲ್ಲಿ ಅರೋಪಿಗಳಿಗೆ ಪರವಾಗಿ ನಡೆದುಕೊಳ್ಳುವ ಮೂಲಕ ಅಪರಾಧಿಗಳಿಗೆ ಜಾಮೀನು ಸಿಗುವಹಾಗೆ, ಅವರು ಬಿಡುಗಡೆಯಾಗುವ ಹಾಗೆ ನಡೆದುಕೊಂಡಿರುವುದು ದುರದೃಷ್ಠಕರವಾಗಿದೆ.

ಮೈಸೂರು ಜಿಲ್ಲೆಯಲ್ಲಿ 8 ಹತ್ಯೆಗಳು ನಡೆದವು ಅದರಲ್ಲಿ 6 ಹತ್ಯೆಗಳು ಧಾರ್ಮಿಕ ಕಾರಣಗಳು ಹೊಂದಿದ್ದವು. ಮುಸ್ಲಿಂ ಯುವತಿಯ ಜೊತೆ ಆತ್ಮಿಯತೆ ಬೆಳಸಿದ ಕಾರಣಕ್ಕೆ ತ್ಯಾಗರಾಜ ಪಿಳೈ ಹತ್ಯೆಯಾಯಿತು. ಈ ಹತ್ಯೆಯ ಆರೋಪಿಗಳು ಎಲ್ಲರೂ ಬಿಡುಗಡೆಯಾಗಿದ್ದಾರೆ. 2009 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾದ ಹರಿಶ ಮತ್ತು ಅವನ ಸಹೋದರ ಸತೀಶ ಮೇಲೆ ಹಲ್ಲೆ ನಡೆಯಿತು, ಅದರಲ್ಲಿ ಹರೀಶ ರವರ ಹತ್ಯೆಯಾಯಿತು. ಈ ಮೇಲಿನ ಯಾವುದೇ ಪ್ರಕರಣದಲ್ಲಿ ಪೋಲಿಸರು ಸೂಕ್ತ ತನಿಖೆಯನ್ನು ಮಾಡಲಿಲ್ಲ ಮತ್ತು ಪೋಲಿಸರು ತಮ್ಮ ಅನುಕೂಲಕ್ಕೆ ತಕ್ಕಂತೆ ವರದಿ ಸಲ್ಲಿಸಿದರು. ಮೈಸೂರಿನ ಕೆ. ರಾಜುರವರ ಹತ್ಯೆಯ ತನಿಖೆಯನ್ನು ಮಾಡುವಾಗ ಉಳಿದ ಹತ್ಯೆಗಳ ಪ್ರಕರಣವನ್ನು ಪೋಲಿಸರು ಭೇದಿಸಿದ್ದಾರೆ. ಪೋಲಿಸರು ಜಾಣತನದಿಂದ ಪ್ರಾರಂಭದಲ್ಲಿ ಕಾನೂನು ಬಾಹಿರ ತಡೆ ಕಾಯಿದೆಯನ್ನು ಕೆಲವು ಹತ್ಯೆಗಳ ಪ್ರಕರಣದಲ್ಲಿ ಹಾಕಿದರೂ ಸಹ, ಆರೋಪಿಗಳಿಗೆ ಜಾಮೀನು ಸಿಗಲು ಯಾವುದೇ ವಿರೋಧ ಮಾಡಲಿಲ್ಲ. ಈ ಕಾಯಿದೆಯ ಕಲಂಗಳನ್ನು ಪೋಲಿಸರು ಯೋಗ್ಯ ರೀತಿಯಲ್ಲಿ ಉಪಯೋಗಿಸಿ ಆರೋಪಿಗಳಿಗೆ ಶಿಕ್ಷೆಯಾಗುವ ಹಾಗೆ ಪ್ರಯತ್ನ ಮಾಡಲಿಲಲ್ಲ. ಆಶ್ಚರ್ಯಕರ ಸಂಗತಿಯೇನೆಂದರೆ ಆರೋಪ ಪತ್ರವನ್ನು ಸಲ್ಲಿಸುವಾಗ ಕಾನೂನು ಬಾಹಿರ ಕಾಯಿದೆಯನ್ನು ಪೋಲಿಸರು ತೆಗೆದರು.

ಈ ರೀತಿ ಮೇಲಿನ ಸಂಘಟಿತ ಅಪರಾಧಿಗಳ ಗುಂಪು ಅನೇಕ ಹಿಂದೂ ನೇತಾರರ ಬರ್ಬರ ಹತ್ಯೆ, ವಿದ್ಯಾರ್ಥಿಗಳ ಅಪಹರಣ, ಸುಲಿಗೆ, ದಂಗೆ ಮುಂತಾದ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಸಹ, ಇವರಿಗೆ ಜಾಮೀನು ನೀಡಲಾಗಿದೆ ಮತ್ತು ಕೆಲವರಿಗೆ ಬಿಡುಗಡೆಯಾಗಿದೆ. ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡುವಾಗ ಸಕ್ಷಾದಾರಗಳ ಕೊರತೆಯ ಕಾರಣಗಳನ್ನು ಹೇಳುತ್ತಿದೆ. ಒಟ್ಟಾರೆ ಈ ಪ್ರಖರಣದಲ್ಲಿ ಪೋಲಿಸರು ಸರಿಯಾಗಿ ತನಿಖೆಯನ್ನು ಮಾಡಿಲ್ಲ. ತನಿಖೆಯಲ್ಲಿ ಸವೋಚ್ಚ ನ್ಯಾಯಾಲಯದ ಮಾರ್ಗದರ್ಶಕ ಸೂತ್ರಗಳನ್ನು ಸರಿಯಾಗಿ ಅನುಷ್ಠಾನ ಮಾಡದ ತನಿಕಾ ಅಧಿಕಾರಿಗಳ ವಿರುದ್ಧ ತನಿಖೆಯಾಗಬೇಕು ಎಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸಬೇಕೆಂದು ಈ ವೇಳೆ ವಿನಂತಿಸಿ ಮನವಿ ನೀಡಲಾಯಿತು.

ಮನವಿ ನೀಡುವ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಲೋಕೇಶ್ ಕುತ್ತಾರ್, ಶ್ರೀ. ಉಪೇಂದ್ರ ಆಚಾರ್ಯ, ಶ್ರೀ. ಉಮೇಶ್ ಆಚಾರ್ಯ, ಶ್ರೀ. ಕೃಷ್ಣ, ಶ್ರೀ. ರಾಜೇಶ್, ಶ್ರೀ. ಶಶಿಧರ್ ಬಾಳಿಗಾ, ಶ್ರೀ. ಯಮನಪ್ಪ ಭಜಂತ್ರಿ, ಶ್ರೀ. ಪ್ರಭಾಕರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version