Home Mangalorean News Kannada News ಮಟಪಾಡಿ ರೈಲ್ವೆ ಹಳಿ ಪಕ್ಕದಲ್ಲಿ ಗುಡ್ಡೆ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ

ಮಟಪಾಡಿ ರೈಲ್ವೆ ಹಳಿ ಪಕ್ಕದಲ್ಲಿ ಗುಡ್ಡೆ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ

Spread the love

ಮಟಪಾಡಿ ರೈಲ್ವೆ ಹಳಿ ಪಕ್ಕದಲ್ಲಿ ಗುಡ್ಡೆ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ

ಉಡುಪಿ: ಬ್ರಹ್ಮಾವರ ಮಟಪಾಡಿ ಸಮೀಪದ ರೈಲ್ವೆ ಹಳಿಯ ಪಕ್ಕದಲ್ಲಿ ಗುಡ್ಡೆಯ ಒಣ ಪ್ರದೇಶಕ್ಕೆ ಗುರುವಾರ ತಡರಾತ್ರಿ ಬೆಂಕಿ ತಗಲಿದ್ದು ವ್ಯಾಪಕವಾಗಿ ಹರಡಿದ್ದ ಕಾರಣ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರು.

ಹಳಿಯ ಪಕ್ಕದಲ್ಲಿ ಗುಡ್ಡೆಯ ಒಣ ಪ್ರದೇಶಕ್ಕೆ ಒಣ ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಒಣ ಪ್ರದೇಶದಲ್ಲಿದ್ದ ಒಣಹುಲ್ಲಿಗೆ ಹಬ್ಬಿತ್ತು. ಏಕಾಏಕಿ ಸುತ್ತಮುತ್ತ ದಟ್ಟ ಹೊಗೆ ಯಂತಾಗಿ ಸ್ಥಳೀಯವಾಗಿ ಬೆಂಕಿಯ ಕೆನ್ನಾಲಿಗೆ ಹರಡಿತ್ತು.

ಬೆಂಕಿ ತಗುಲಿದ ಕುರಿತು ಉಡುಪಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವ ಕಾರ್ಯವನ್ನು ಪೂರ್ಣಗೊಳಿಸಿದರು. ಆದರೆ ಮತ್ತೊಮ್ಮೆ ಬೆಂಕಿ ಇನ್ನೊಂದು ಭಾಗದಲ್ಲಿ ಹರಡಿದ್ದ ಕಾರಣ ಸ್ಥಳೀಯರೇ ಸ್ವತಃ ನಂದಿಸುವ ಕೆಲಸ ನಿರ್ವಹಿಸಿದರು.

ಚೇತನ್ ಪೂಜಾರಿ, ಶ್ರೀನಿಧಿ, ಮನೋಜ್ ನಾಯಕ್, ಮಹಮದ್ ಜಾಕಿ, ಕಿರಣ್ ನಾಯಕ್, ಅನುಷ್ ಪೂಜಾರಿ , ಶರೊನ್ ಸಿಕ್ವೇರಾ, ಶರತ್ ನಾಯಕ್, ರಿತೇಶ್, ಅಖಿಲೇಶ್, ಅಕ್ಷಯ್, ಕಿರಣ, ನಿಖಿಲ್ ನಾಯಕ್ ಮೊದಲಾದವರು ಬೆಂಕಿ ನಂದಿಸಲು ಸಹಕರಿಸಿದರು


Spread the love

Exit mobile version