Home Mangalorean News Kannada News ರಸ್ತೆ ದಾಟುತ್ತಿದ್ದ ಹಿರಿಯ ನಾಗರಿಕರು ಅಪಘಾತಕ್ಕೆ ಬಲಿ

ರಸ್ತೆ ದಾಟುತ್ತಿದ್ದ ಹಿರಿಯ ನಾಗರಿಕರು ಅಪಘಾತಕ್ಕೆ ಬಲಿ

Spread the love
RedditLinkedinYoutubeEmailFacebook MessengerTelegramWhatsapp

ರಸ್ತೆ ದಾಟುತ್ತಿದ್ದ ಹಿರಿಯ ನಾಗರಿಕರು ಅಪಘಾತಕ್ಕೆ ಬಲಿ

ಕುಂದಾಪುರ: ಹಂಗ್ಳೂರಿನಲ್ಲಿ ಬಸ್ ಇಳಿದು ರಸ್ತೆ ದಾಟುತ್ತಿದ್ದ ಹಿರಿಯ ನಾಗರಿಕರೋರ್ವರಿಗೆ ಕಾರು ಗುದ್ದಿದಾಗ ಮೃತಪಟ್ಟ ಖೇದಕರ ಘಟನೆ ವರದಿಯಾಗಿದೆ.

ಮೃತರನ್ನು ಮಹಾರಾಷ್ಟ್ರದ ಗೋರೆಗಾಂವ್ ನಿವಾಸಿ ರಮಣಿ ಭಂಡಾರ್ಕರ್(63) ಎಂದು ಗುರುತಿಸಲಾಗಿದೆ.

ಕುಂದಾಪುರದ ಖ್ಯಾತ ಉದ್ಯಮಿ ಹಾಗೂ ಹೊಂಬಾಡಿ ಬಳಿ ಇರುವ ಕಾಮತ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಡಿಪ್ಲೋಮಾ ಕಾಲೇಜಿನ ಮುಖ್ಯಸ್ಥ ದೇವದಾಸ್ ಕಾಮತ್ ಅವರ ಸಹೋದರಿಯಾಗಿದ್ದಾರೆ ರಮಣಿ ಭಂಡಾರ್ಕರ್.

ವಿನಾಯಕ ನಿಲ್ದಾಣದಲ್ಲಿ ಇಳಿಯಬೇಕಿದ್ದ ರಮಣಿ ಭಂಡಾರ್ಕರ್ ಬಸ್ ಮುಂದೆ ಸಾಗಿದಾಗ ಕಾಮತ್ ಬಜಾಜ್ ಶೋರೂಮ್ ಅನತಿ ದೂರದಲ್ಲಿ ಕಂಡಕ್ಟರ್ ಬಳಿ ಹೇಳಿ ಬಸ್ ನಿಲ್ಲಿಸಿ ಇಳಿದಿದ್ದರು ಎನ್ನಲಾಗಿದೆ.

ಬಸ್ ಇಳಿದು ಚತುಷ್ಪತ ಹೆದ್ದಾರಿ ಒಂದು ರಸ್ತೆಯನ್ನು ದಾಟಿ ಇನ್ನೊಂದು ರಸ್ತೆಯನ್ನು ದಾಟುವ ವೇಳೆ ಈ ಅವಘಡ ನಡೆದಿದೆ.

ಹಿರಿಯಡ್ಕದಿಂದ ಪೂನಾಕ್ಕೆ ಸಾಗುತ್ತಿದ್ದ ಇನ್ನೋವಾ ಕಾರು ಅತೀ ವೇಗದಿಂದ ರಮಣಿಯವರಿಗೆ ಗುದ್ದಿದ ರಭಸಕ್ಕೆ ಅವರು ಗಂಭೀರ ಗಾಯಗೊಂಡರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವಪ್ಪಿದ್ದಾರೆ.

ರಮಣಿಯವರು ಚೌತಿ ಸಂಭ್ರಮವನ್ನು ತನ್ನ ತವರಿನಲ್ಲಿ ಕಳೆಯಲು ಮುಂಬಯಿಯಿಂದ ಬಂದಿದ್ದರು.

ಕುಂದಾಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version