ರಾ.ಹೆ. ಅವ್ಯವಸ್ಥೆ : ಸಂಸದೆ ಶೋಭಾ ಕರಂದ್ಲಾಜೆಯನ್ನು ಹುಡುಕಿ ಕೊಡಿ – ಎಐಸಿಸಿ ಸದಸ್ಯ ಅಮೃತ್ ಶೆಣೈ

Spread the love

ರಾ.ಹೆ. ಅವ್ಯವಸ್ಥೆ : ಸಂಸದೆ ಶೋಭಾ ಕರಂದ್ಲಾಜೆಯನ್ನು ಹುಡುಕಿ ಕೊಡಿ – ಎಐಸಿಸಿ ಸದಸ್ಯ ಅಮೃತ್ ಶೆಣೈ

ಉಡುಪಿ: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ಅವ್ಯವಸ್ಥೆಗಳ ಆಗರವಾಗಿ ಪ್ರಯಾಣಿಕರು ಪ್ರತಿನಿತ್ಯ ಜೀವಭಯದಲ್ಲಿ ಪ್ರತಿನಿತ್ಯ ಸಂಚರಿಸುವಂತಾಗಿದ್ದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 4 ವರ್ಷದ ಹಿಂದೆ ಪ್ರಚಂಡ ಬಹುಮತದಿಂದ ಗೆದ್ದ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ಇದರ ಸದಸ್ಯರಾದ ಅಮೃತ್ ಶೆಣೈ ಸಂಸದರ ವರ್ತನೆಯನ್ನು ಖಂಡಿಸಿದ್ದಾರೆ.

ಈ ಬಾರಿ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಮಸ್ಯೆ, ಅವ್ಯವಸ್ಥೆಗಳಿಂದ ಅನೇಕ ಅಪಘಾತಗಳಾಗಿವೆ. ನೆರೆಗೆ ಸರಿಯಾದ ವ್ಯವಸ್ಥೆ ಇಲ್ಲದೆ ಜನರಿಗೆ ತೊಂದರೆಯಾಗಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಂಸದರು ಕೇವಲ ರಾಜಕೀಯ ಚಟುವಟಿಕೆಗೆ ಮಾತ್ರ ತಮ್ಮನ್ನು ಸೀಮಿತವಾಗಿಸಿಕೊಂಡಿದ್ದಾರೆ ವಿನಃ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸಾರ್ವಜನಿಕರು ‘ಸಂಸದರನ್ನು ಹುಡುಕಿ ಕೊಡಿ’ ಎಂದು ಹೇಳುತ್ತಿದ್ದಾರೆ. ಎ ಐ ಸಿ ಸಿ ಸದಸ್ಯ ಅಮೃತ್ ಶೆಣೈ ಶೋಭಾ ಕರಂದ್ಲಾಜೆಯವರ ಬೇಜವಾಬ್ದಾರಿತನವನ್ನು ಖಂಡಿಸಿದ್ದಾರೆ.


Spread the love