Home Mangalorean News Kannada News ರೈಲಿಗೆ ಕಲ್ಲೆಸೆತ- ಶಿಕ್ಷಾರ್ಹ ಅಪರಾಧ

ರೈಲಿಗೆ ಕಲ್ಲೆಸೆತ- ಶಿಕ್ಷಾರ್ಹ ಅಪರಾಧ

Spread the love

ರೈಲಿಗೆ ಕಲ್ಲೆಸೆತ- ಶಿಕ್ಷಾರ್ಹ ಅಪರಾಧ

ಉಡುಪಿ: ಕೊಂಕಣ ರೈಲ್ವೆ ಮಾರ್ಗದಲ್ಲಿ ಇತ್ತೀಚೆಗೆ ಚಲಿಸುವ ರೈಲಿಗೆ ಕಲ್ಲೆಸೆಯುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇದರಿಂದ ರೈಲಿನಲ್ಲಿರುವ ಪ್ರಯಾಣಿಕರು ಗಂಭೀರವಾಗಿ ಗಾಯಗೊಳ್ಳುತ್ತಿರುವುದು ವರದಿಯಾಗುತ್ತಿದೆ.

ಪ್ರಸ್ತುತ ಶಾಲೆಗಳಿಗೆ ರಜೆಯಿದ್ದು, ಶಾಲಾ ಮಕ್ಕಳು ಮೋಜಿಗಾಗಿ , ಪ್ರಕರಣಗಳ ಗಂಭೀರತೆ ಬಗ್ಗೆ ಅರಿಯದೇ ಇಂತಹ ಕೃತ್ಯ ಎಸೆಗುತ್ತಿರುವುದು ಕಂಡುಬಂದಿದ್ದು, ಈ ಕುರಿತಂತೆ ಪೋಷಕರು ತಮ್ಮ ಮಕ್ಕಳಿಗೆ ಅರಿವು ಮೂಡಿಸುವಂತೆ ಹಾಗೂ ರೈಲಿಗೆ ಕಲ್ಲೆಸೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಪ್ರಾಪ್ತರು ಮಾಡುವ ಇಂತಹ ಅಪರಾಧಗಳಿಗೆ ಅವರ ಪೋಷಕರಿಗೂ ಸಹ ಕಾನೂನಿನ ರೀತಿ ಶಿಕ್ಷೆ ವಿಧಿಸಲಾಗುವುದು.

ರೈಲುಗಳ ಸುಗಮ ಸಂಚಾರ ಮತ್ತು ಪ್ರಯಾಣಿಕರ ಸುರಕ್ಷತೆ ಕುರಿತಂತೆ ರೈಲ್ವೆ ಇಲಾಖೆಯೊಂದಿಗೆ ಸಹಕರಿಸುವಂತೆ ಆರ್.ಪಿ.ಎಫ್ ಇನ್ಸ್‍ಪೆಕ್ಟರ್ , ಕೊಂಕಣ ರೈಲ್ವೆ, ಉಡುಪಿ ಅವರ ಪ್ರಕಟಣೆ ತಿಳಿಸಿದೆ.


Spread the love

Exit mobile version