ವಾಟ್ಸಾಪ್ ಗ್ರೂಪಿನಲ್ಲಿ ಮತಿಯ ಭಾವನೆ ಕೆರಳಿಸುವ ಲೇಖನ ಒರ್ವನ ಬಂಧನ

Spread the love

ವಾಟ್ಸಾಪ್ ಗ್ರೂಪಿನಲ್ಲಿ ಮತಿಯ ಭಾವನೆ ಕೆರಳಿಸುವ ಲೇಖನ ಒರ್ವನ ಬಂಧನ

ಪುತ್ತೂರು: ವಾಟ್ಸಾಪ್ ಗ್ರೂಪಿನಲ್ಲಿ ಮತಿಯ ಭಾವನೆ ಕೆರಳಿಸುವ ಲೇಖನ ರವಾನಿಸಿದ ವ್ಯಕ್ತಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪುತ್ತೂರು ಬನ್ನೂರು ಜನತಾ ಕಾಲೋನಿ ನಿವಾಸಿ ಲೋಕೇಶ್ ಆಚಾರ್ಯ (40) ಎಂದು ಗುರುತಿಸಲಾಗಿದೆ.

ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಯವರ ಹೆಸರಿನಲ್ಲಿ ‘ಪುತ್ತೂರ್ದ ಮುತ್ತು’ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಹಿಂದೂ ಮುಸ್ಲಿಂ ಮತೀಯರ ನಡುವೆ ದ್ವೇಷ ಮನಸ್ಸಿನ ಭಾವನೆಯನ್ನು ಪ್ರಚೋದಿಸುವಂತಹ ಮತ್ತು ಹಿಂದೂ ಜನರಲ್ಲಿ ಮಾಜಿ ಶಾಸಕರ ಮೇಲೆ ದ್ವೇಷವನ್ನು ಉಂಟು ಮಾಡುವಂತಹ ಲೇಖನವನ್ನು ಯಾರೋ ಕಿಡಿಗೇಡಿಗಳು ರವಾನಿಸಿದ್ದು ಪ್ರಕರಣದ ಆರೋಪಿ ಕೆ ಪಿ ಲೋಕೇಶ್ ಆಚಾರ್ಯ ಆಗಿದ್ದು ಈತನನ್ನು ದಸ್ತಗಿರಿ ಮಾಡಲಾಗಿದೆ.

ಪುತ್ತೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


Spread the love