Home Mangalorean News Kannada News ವಿಶ್ವ ಆ್ಯಂಬುಲೆನ್ಸ್ ದಿನದ ಅಂಗವಾಗಿ `ನೀವು ಎಲ್ಲಿಯಾದರೂ ಜೀವವನ್ನು ಉಳಿಸಬಹುದು’ ಎಂಬ ಅಭಿಯಾನವನ್ನು ಆಯೋಜಿಸಿದ ಕೆಎಂಸಿ...

ವಿಶ್ವ ಆ್ಯಂಬುಲೆನ್ಸ್ ದಿನದ ಅಂಗವಾಗಿ `ನೀವು ಎಲ್ಲಿಯಾದರೂ ಜೀವವನ್ನು ಉಳಿಸಬಹುದು’ ಎಂಬ ಅಭಿಯಾನವನ್ನು ಆಯೋಜಿಸಿದ ಕೆಎಂಸಿ ಆಸ್ಪತ್ರೆ

Spread the love

ವಿಶ್ವ ಆ್ಯಂಬುಲೆನ್ಸ್ ದಿನದ ಅಂಗವಾಗಿ `ನೀವು ಎಲ್ಲಿಯಾದರೂ ಜೀವವನ್ನು ಉಳಿಸಬಹುದು’ ಎಂಬ ಅಭಿಯಾನವನ್ನು ಆಯೋಜಿಸಿದ ಕೆಎಂಸಿ ಆಸ್ಪತ್ರೆ

ಜೀವ ಉಳಿಸುವ ತಂತ್ರಗಳಲ್ಲಿ ಸಾಮಾನ್ಯ ಸಾರ್ವಜನಿಕರಿಗೆ ತರಬೇತಿ ನೀಡುವ ಗುರಿ

ಮಂಗಳೂರು: ವಿಶ್ವ ಆ್ಯಂಬುಲೆನ್ಸ್ ದಿನದ ಅಂಗವಾಗಿ `ನೀವು ಎಲ್ಲಿಯಾದರೂ ಜೀವವನ್ನು ಉಳಿಸಬಹುದು’ ಎಂಬ ಅಭಿಯಾನವನ್ನು ಕೆಎಂಸಿ ಆಸ್ಪತ್ರೆ ನಗರದಲ್ಲಿ ಇಂದು ಆಯೋಜಿಸಿತ್ತು. ಜೀವ ಉಳಿಸುವ ತಂತ್ರಗಳಲ್ಲಿ ಜಾಗೃತಿ ಮೂಡಿಸುವ ಗುರಿ ಹೊಂದಿರುವ ಕಾರ್ಯಕ್ರಮ  ಮತ್ತು ಸಾಮಾನ್ಯ ಸಾರ್ವಜನಿಕರಿಗೆ ತರಬೇತಿ ನೀಡುವ ಗುರಿ ಹೊಂದಿರುವ ಅಭಿಯಾನ ಸಾಮಾನ್ಯ ಸಾರ್ವಜನಿಕರಿಗೆ ಸಿಪಿಆರ್(ಕಾರ್ಡಿಯೋಪಲ್ಮನರಿ ರಿಸಸಿಟೇಷನ್)ನಂತಹ ಜೀವ ಉಳಿಸುವ ತಂತ್ರಗಳಲ್ಲಿ ತರಬೇತಿ ನೀಡಲಿದೆ.

ಈ ಸಂದರ್ಭದಲ್ಲಿ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಆನಂದ್ ವೇಣುಗೋಪಾಲ್ ಅವರು ಮಾತನಾಡಿ, “ಬಹಳಷ್ಟು ಜನರು ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವುದು ಅಥವ ಜೀವ ಕಳೆದುಕೊಳ್ಳುತ್ತಿದ್ದು, ಅವರ ಜೀವಗಳನ್ನು ಉಳಿಸುವಲ್ಲಿ ಆ್ಯಂಬುಲೆನ್ಸ್‍ಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ, ಆ್ಯಂಬುಲೆನ್ಸ್‍ಗಳ ಕಡೆಗೆ ಜನರು ನಿರ್ಲಕ್ಷ್ಯವಹಿಸುತ್ತಾರೆ. ಅನೇಕ ಬಾರಿ ಅವುಗಳು ಮುಂದೆ ಸಾಗಲು ದಾರಿ ಮಾಡಿಕೊಡುವುದಿಲ್ಲ. ಆ್ಯಂಬುಲೆನ್ಸ್‍ವೊಂದಕ್ಕೆ ದಾರಿ ಬಿಟ್ಟುಕೊಡುವುದು ಎಷ್ಟು ಗಂಭೀರ ಮತ್ತು ಪ್ರಮುಖ ಎಂಬುದರ ಬಗ್ಗೆ ಜನರಲ್ಲಿ ಸಂವೇದನೆ ಮೂಡಿಸುವುದು ಅತ್ಯಂತ ಮುಖ್ಯವಾಗಿರುತ್ತದೆ. ಜನರು ಇದನ್ನು ಅರ್ಥ ಮಾಡಿಕೊಂಡರೆ ಈ ನಿಟ್ಟಿನಲ್ಲಿ ಅರ್ಧ ಹೋರಾಟ ಗೆದ್ದಂತೆ’’ ಎಂದರು.

“ಜೀವ ಉಳಿಸಬಹುದಾದ ‘ಸುವರ್ಣ ಘಂಟೆ’ ಪ್ರಾಮುಖ್ಯತೆ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಮತ್ತು ಪ್ರೋತ್ಸಾಹಿಸುವುದು ಈ ಅಭಿಯಾನದ ಹಿಂದಿನ ಉದ್ದೇಶವಾಗಿದೆ. ಆಂಬ್ಯುಲೆನ್ಸ್ ಒಂದಕ್ಕೆ ದಾರಿ ಮಾಡಿಕೊಡುವುದು ಎಷ್ಟು ಅಗತ್ಯ ಎಂಬುದನ್ನು ಅವರಿಗೆ ತಿಳಿಹೇಳಲಾಗುತ್ತದೆ. ಇದಕ್ಕಾಗಿಯೇ ಮಣಿಪಾಲ್ ಆಸ್ಪತ್ರೆ ಸಾರ್ವಜನಿಕರಿಗೆ ಸಿಪಿಆರ್(ಕಾರ್ಡಿಯೋಪಲ್ಮನರಿ ರಿಸಸಿಟೇಷನ್)ನಂತಹ ಜೀವ ಉಳಿಸುವ ತಂತ್ರಗಳ ಬಳಕೆಯಲ್ಲಿ ತರಬೇತಿ ನೀಡಲಿದೆ’’ ಎಂದು ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ದಿಕಿ ಹೇಳಿದರು.

ಮಣಿಪಾಲ್ ಆ್ಯಂಬುಲೆನ್ಸ್ ರೆಸ್ಪಾನ್ಸ್ ಸರ್ವೀಸ್ (ಮಾರ್ಸ್) ಅನ್ನು 2015ರಲ್ಲಿ ಆರಂಭಿಸಲಾಗಿದ್ದು, ಅಂದಿನಿಂದ ಜೀವಗಳನ್ನು ಉಳಿಸುವಲ್ಲಿ ಮತ್ತು ರೋಗಿಗಳು ಹಾಗೂ ಅವರ ಪ್ರೀತಿಪಾತ್ರರ ಮುಖಗಳಲ್ಲಿ ಮಂದಹಾಸ ಮೂಡಿಸುವ ಅತ್ಯುತ್ತಮ ಫಲಿತಾಂಶಗಳ ಖಾತ್ರಿ ಮಾಡಿಕೊಳ್ಳುತ್ತಿದೆ. ಜಿಪಿಎಸ್ ಆಧಾರಿತ ನೇರ ವಾಹನ ಪತ್ತೆ ಮಾಡುವ ವ್ಯವಸ್ಥೆಯನ್ನು ಹೊಂದಿರುವ ಹಾಗೂ ಗಂಭೀರ ಸ್ಥಿತಿಗಳಲ್ಲಿ ಜೀವ ಉಳಿಸುವ ಉಪಕರಣಗಳೊಂದಿಗೆ ಸಜ್ಜಾಗಿರುವ ಮಣಿಪಾಲ್‍ನ ಆ್ಯಂಬುಲೆನ್ಸ್‍ಗಳಲ್ಲಿ ಕೇಂದ್ರ ನಿರೀಕ್ಷಣಾ ವ್ಯವಸ್ಥೆ(ಸಿಎಂಎಸ್) ಅಳವಡಿಸಲಾಗಿದ್ದು, ಇದು ರೋಗಿಯ ಸ್ಥಿತಿಯನ್ನು ಕುರಿತ ಚಿತ್ರಗಳನ್ನು ತುರ್ತು ಪ್ರತಿಕ್ರಿಯಾ ಕೇಂದ್ರಕ್ಕೆ ರವಾನಿಸುತ್ತವೆ. ಯಾವುದೇ ರೀತಿಯ ಪ್ರಮುಖ ತುರ್ತುಸ್ಥಿತಿಗಳನ್ನು ನಿಭಾಯಿಸಲು ಆ್ಯಂಬುಲೆನ್ಸ್‍ಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಅವಕಾಶ ಮಾಡಿಕೊಡುತ್ತದೆ.

ಈ ಸಂದರ್ಭದಲ್ಲಿ ಕೆಎಂಸಿ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಶೇಷತಜ್ಞರಾದ ಡಾ. ಜೀದು ರಾಧಾಕೃಷ್ಣನ್ ಮಾತನಾಡಿ, “ಜೀವನದಲ್ಲಿ ಕೆಲವು ಸ್ಥಿತಿಗಳಲ್ಲಿ ತಕ್ಷಣ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಕ್ಷಣಾರ್ಧದಷ್ಟು ವಿಳಂಬವೂ ಕೂಡ ಒಬ್ಬರ ಜೀವನವನ್ನು ತೀವ್ರ ರೀತಿಯಲ್ಲಿ ಬದಲಿಸಬಲ್ಲದು. ಆಂಬ್ಯುಲೆನ್ಸ್‍ಗಳ ಪ್ರಾಮುಖ್ಯತೆ ಮತ್ತು ಜೀವ ಉಳಿಸುವಲ್ಲಿ ಅವು ವಹಿಸುವ ಪಾತ್ರದ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ.  ಸುವರ್ಣ ಘಂಟೆ ಕುರಿತು ಜಾಗೃತಿ ಹೆಚ್ಚಿಸುವಲ್ಲಿ ನಮ್ಮ ಪ್ರಯತ್ನ ಹೆಚ್ಚಿಸಲು ಮತ್ತು ಮೂಲ ಜೀವ ಬೆಂಬಲದ ತಂತ್ರದೊಂದಿಗೆ ಸಾರ್ವಜನಿಕರನ್ನು ಸಬಲೀಕರಿಸಲು, ಮುಂಬರುವ ದಿನಗಳಲ್ಲಿ ಪೊಲೀಸ್ ಇಲಾಖೆ, ಪತ್ರಕರ್ತರ ಒಕ್ಕೂಟ, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಶಾಲೆಗಳಿಗೆ ಸಿಪಿಆರ್ ತರಬೇತಿಯನ್ನು ನಾವು ಪೂರೈಸಲಿದ್ದೇವೆ ಎಂದರು.


Spread the love

Exit mobile version