ಶಾಲಾ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಕಾರ್ಯಕ್ರಮ: ಜಮಾತೆ ಇಸ್ಲಾಮಿ ಹಿಂದ್ ಖಂಡನೆ

Spread the love

ಶಾಲಾ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಕಾರ್ಯಕ್ರಮ: ಜಮಾತೆ ಇಸ್ಲಾಮಿ ಹಿಂದ್ ಖಂಡನೆ

ಮಂಗಳೂರು: ಬಂಟ್ವಾಳ ತಾಲೂಕಿನ ಕಲ್ಲಡ್ಕದ ಶ್ರೀ ರಾಮ ವಿದ್ಯಾ ಕೇಂದ್ರ ಶಾಲೆಯ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಬಾಬರಿ ಮಸೀದಿ ದ್ವಂಸ ಗೈಯುವಂತಹ ಪ್ರಚೋದನಾತ್ಮಕ, ದ್ವೇಷ ಭಾವನೆಯನ್ನು ಸೃಷ್ಟಿಸಿ,
ಸಮಾಜದಲ್ಲಿ ಶಾಂತಿಯನ್ನು ಕೆಡಿಸುವ ಕಾರ್ಯಕ್ರಮವನ್ನು ಜಮಾತೆ ಇಸ್ಲಾಮಿ ಹಿಂದ್ ದ.ಕ. ಜಿಲ್ಲಾ ಸಂಚಾಲಕರಾದ ಸಯೀದ್ ಇಸ್ಮಾಯಿಲ್ ಖಂಡಿಸಿದ್ದಾರೆ.

ಶಾಲಾ ಆಡಳಿತ ಸಮಿತಿ, ಮತ್ತು ಮುಖ್ಯೋಪಾಧ್ಯಾಯರ ಮೇಲೆ ಪೊಲೀಸು ಇಲಾಖೆ ಯು ಸೂಕ್ತ ಕ್ರಮ ಕೈಗೊಂಡು, ಇಂತಹ ಕಾರ್ಯ ಕ್ರಮಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ.


Spread the love