Home Mangalorean News Kannada News ಶಿರೂರು ಸ್ವಾಮಿಜಿ ದೇಹದಲ್ಲಿ ವಿಷಕಾರಿ ಅಂಶ ; ಸಹೋದರನಿಂದ ಹಿರಿಯಡ್ಕ ಠಾಣೆಯಲ್ಲಿ ಕೇಸ್ ದಾಖಲು

ಶಿರೂರು ಸ್ವಾಮಿಜಿ ದೇಹದಲ್ಲಿ ವಿಷಕಾರಿ ಅಂಶ ; ಸಹೋದರನಿಂದ ಹಿರಿಯಡ್ಕ ಠಾಣೆಯಲ್ಲಿ ಕೇಸ್ ದಾಖಲು

Spread the love

ಶಿರೂರು ಸ್ವಾಮಿಜಿ ದೇಹದಲ್ಲಿ ವಿಷಕಾರಿ ಅಂಶ ; ಸಹೋದರನಿಂದ ಹಿರಿಯಡ್ಕ ಠಾಣೆಯಲ್ಲಿ ಕೇಸ್ ದಾಖಲು

ಉಡುಪಿ: ಗುರವಾರ ಬೆಳಿಗ್ಗೆ ನಿಧನರಾದ ಶಿರೂರು ಶ್ರೀಗಳ ದೇಹದಲ್ಲಿ ವಿಷ ಅಂಶ ಕಂಡು ಬಂದಿದೆ ಎಂದು ವೈದ್ಯರ ಹೇಳಿಕೆಯನ್ನು ಆಧರಿಸಿ ಸ್ವಾಮೀಜಿ ಸಹೋದರ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸ್ವಾಮೀಜಿಗಳನ್ನು ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರ ಆರೋಗ್ಯ ತುಂಬಾ ಹದಗೆಟ್ಟಿತ್ತು. ನಮ್ಮ ವೈದ್ಯರ ತಂಡವೆಲ್ಲರೂ ಸೇರಿ ಚಿಕಿತ್ಸೆ ಕೊಟ್ಟಿದ್ದೆವು. ಆದರೆ ಬಹು ಅಂಗಾಗ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ ನಂತರ ಹೊಟ್ಟೆಯಲ್ಲಿ ವಿಷಕಾರಕ ಅಂಶ ಇರುವುದು ಪತ್ತೆಯಾಗಿದೆ. ಹೊಟ್ಟೆಯೊಳಗೆ ತೀವ್ರ ರಕ್ತಸ್ರಾವವಾಗಿತ್ತು. ನಮ್ಮ ಸಂಶಯವನ್ನ ಪೊಲೀಸರಿಗೆ ತಿಳಿಸಿದ್ದೇವೆ. ಮುಂದಿನ ಕ್ರಮ ಪೊಲೀಸರು ಕೈಗೊಳ್ಳುತ್ತಾರೆ. ಕೆಎಂಸಿ. ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯ ಡಾ.ಅವಿನಾಶ್ ಹೇಳಿದ್ದ ಬೆನ್ನಲ್ಲೆ ಸ್ವಾಮೀಜಿಯವರ ಸಹೋದರ ಲಾತವ್ಯ ಆಚಾರ್ಯ ಸ್ವಾಮೀಜಿ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಹಿರಿಯಡ್ಕ ಠಾಣೆಯಲ್ಲಿ ದೂರು ನೀಡಿದ್ದಾರೆ.

ಲಾತವ್ಯ ಆಚಾರ್ಯರ ದೂರನ್ನು ಹಿರಿಯಡ್ಕ ಪೋಲಿಸರು ದಾಖಲಿಸಿಕೊಂಡಿದ್ದಾರೆ


Spread the love

Exit mobile version