ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಗುರು ವಂ ಅಂತೋನಿ ಪೀಟರ್ ಅಪಘಾತದಲ್ಲಿ ಮೃತ್ಯು

Spread the love

ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಗುರು ವಂ ಅಂತೋನಿ ಪೀಟರ್ ಅಪಘಾತದಲ್ಲಿ ಮೃತ್ಯು

ಶಿವಮೊಗ್ಗ:  ಜಿಲ್ಲೆಯ ಶಿಕಾರಿಪುರ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಗುರು ಫಾದರ್ ಅಂತೋನಿ ಪೀಟರ್ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.

ಕಾರಿನಲ್ಲಿ ತಮ್ಮ ಧಾರ್ಮಿಕ ತರಬೇತಿ ಪಡೆಯುತ್ತಿದ್ದ ಬ್ರದರ್ ಜೊತೆಗೆ ತೆರಳುವಾಗ ಅಡ್ಡಬಂದ ಎಮ್ಮೆಯಿಂದ ರಕ್ಷಣೆ ಪಡೆಯಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ಎದುರಿಗೆ ಬಂದ ಬಸ್ ಗೆ ಗುದ್ದಿದೆ.ಅಪಘಾತದ ತೀವ್ರತೆಗೆ ಫಾದರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಅವರ ಸಹೋದರನಿಗೆ ಕಾಲು ಮುರಿತವಾಗಿದೆ.

ಅನೇಕ ವರ್ಷಗಳಿಂದ ಶಿವಮೊಗ್ಗ ಧರ್ಮಕ್ಷೇತ್ರದ ವ್ಯಾಪ್ತಿಯ ಅನೇಕ ಚರ್ಚ್ ಗಳಲ್ಲಿ ಕೆಲಸ ಮಾಡುತ್ತಿದ್ದ ಫಾದರ್ ಅಂತೋನಿ ಪೀಟರ್ ಸದ್ಯ ಶಿವಮೊಗ್ಗ ಧರ್ಮಕ್ಷೇತ್ರದ ಚರ್ಚ್ ವೊಂದರಲ್ಲಿ ವಿಚಾರಣಾಗುರುವಾಗಿ ಕೆಲಸ ಮಾಡುತ್ತಿದ್ದರು.ತಮ್ಮ ವೈಯುಕ್ತಿಕ ಕೆಲಸದ ನಿಮಿತ್ತ ಕಾರಿನಲ್ಲಿ ಶಿಕಾರಿಪುರಕ್ಕೆ ತೆರಳುತ್ತಿದ್ದರು.ಸವಳಂಗ ಸಮೀಪದ ಮಾರ್ಗದಲ್ಲಿ ಅಡ್ಡಬಂದ ಎಮ್ಮೆಯಿಂದ ಬಚಾವಾಗಲು ಕಾರನ್ನು ಪಕ್ಕಕ್ಕೆ ತಿರುಗಿಸಿದಾಗ ಎದುರಿಗೆ ಬಂದ ಬಸ್ ಗೆ ಡಿಕ್ಕಿ ಹೊಡೆದಿದೆ.ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಅವರು ಪ್ರಯಾಣಿಸುತ್ತಿದ್ದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಶಿವಮೊಗ್ಗ ಧರ್ಮಕ್ಷೇತ್ರದಲ್ಲಿ ಎಲ್ಲರೊಂದಿಗೆ ಸ್ನೇಹಭಾವದಿಂದ ಬೆರೆಯುತ್ತಿದ್ದ ಫಾದರ್ ಅಂತೋನೆ ಪೀಟರ್ ಅಜಾತಶತೃವೆಂದೇ ಹೆಸರಾಗಿದ್ದರು.ಧಾರ್ಮಿಕ ವಿಚಾರಗಳಲ್ಲೂ ಕೂಡ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಅವರು 2016 ರಿಂದ 2023 ರ ತನಕ ಹರಿಹರ ಆರೋಗ್ಯ ಮಾತೆ ಕಿರು ಬಸಿಲಿಕಾದ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು.


Spread the love