ಸಚಿವೆ ಡಾ.ಜಯಮಾಲಾರಿಂದ ಸಾರ್ವಜನಿಕರೊಂದಿಗೆ ನಾಗರಪಂಚಮಿ ಪ್ರಾರ್ಥನೆ

Spread the love

ಸಚಿವೆ ಡಾ.ಜಯಮಾಲಾರಿಂದ ಸಾರ್ವಜನಿಕರೊಂದಿಗೆ ನಾಗರಪಂಚಮಿ ಪ್ರಾರ್ಥನೆ

ಉಡುಪಿ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಅವರು ಬುಧವಾರ ನಾಗರ ಪಂಚಮಿಯ ಪ್ರಾರ್ಥನೆಯನ್ನು ಸಾರ್ವಜನಿಕರೊಂದಿಗೆ ಸಲ್ಲಿಸಿದರು.

ನೆರೆಪೀಡಿತ ಪ್ರದೇಶಗಳಿಗೆ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಬ್ರಹ್ಮಾವರ ವ್ಯಾಪ್ತಿಯ ಉಪ್ಪೂರು ಕುದ್ರುಬೆಟ್ಟು ಗ್ರಾಮದಲ್ಲಿ ಸ್ಥಳೀಯರು ನಾಗಬನದಲ್ಲಿ ಪೂಜೆ ನಡೆಸುತ್ತಿರುವುದನ್ನು ಗಮನಿಸಿದ ಸಚಿವೆ ಸ್ಥಳೀಯರ ಆಹ್ವಾನದಂತೆ ನಾಗಸನ್ನಿಧಿಗೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡರು.

ಸ್ಥಳೀಯ ಜನರೊಂದಿಗೆ ನಿಂತುಕೊಂಡು ಪ್ರಾರ್ಥನೆ ಸಲ್ಲಿಸಿ, ತಂಬಿಲದ ಪ್ರಸಾದ ಸ್ವೀಕರಿಸಿದರು. ನೆರೆಪ್ರದೇಶದ ಜನತೆಗೆ ಕ್ಷೇಮವಾಗುಂತೆ ಒಳ್ಳೆಯ ಕೆಲಸಗಳು ಸಚಿವರಿಂದ ನಡೆಯುಂತಾಗಲಿ ಎಂದು ಈ ಸಂದರ್ಭದಲ್ಲಿ ಅರ್ಚಕರು ಊರವರವರ ಪರವಾಗಿ ಹರಸಿದರು.


Spread the love