Home Mangalorean News Kannada News ಸದ್ಯದಲ್ಲೇ ಕಾಂಗ್ರೆಸ್ ಮುಕ್ತ ಭಾರತ:  ದೇಶಕ್ಕೆ ಬಿಜೆಪಿಯೇ ಬೇಕು – ವೀಣಾ ಎಸ್. ಶೆಟ್ಟಿ

ಸದ್ಯದಲ್ಲೇ ಕಾಂಗ್ರೆಸ್ ಮುಕ್ತ ಭಾರತ:  ದೇಶಕ್ಕೆ ಬಿಜೆಪಿಯೇ ಬೇಕು – ವೀಣಾ ಎಸ್. ಶೆಟ್ಟಿ

Spread the love

ಸದ್ಯದಲ್ಲೇ ಕಾಂಗ್ರೆಸ್ ಮುಕ್ತ ಭಾರತ:  ದೇಶಕ್ಕೆ ಬಿಜೆಪಿಯೇ ಬೇಕು – ವೀಣಾ ಎಸ್. ಶೆಟ್ಟಿ

ಉಡುಪಿ: ಕಾಂಗ್ರೆಸಿನ ಬಿಟ್ಟಿ ಭಾಗ್ಯಗಳಿಗೆ ಯಾವುದೇ ಮನ್ನಣೆ ನೀಡದೆ ಮೂರು ರಾಜ್ಯಗಳ ಜನತೆ ದೇಶಕ್ಕೆ ಮೋದಿ ಪ್ರಧಾನಿ ಆಗಬೇಕು ಎನ್ನುವ ದೃಷ್ಟಿಯಿಂದ ಬಿಜೆಪಿಯನ್ನು ಗೆಲ್ಲಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೂಡ ಬಿಜೆಪಿ ಪಕ್ಷ ಗೆಲ್ಲುವ ಸೂಚನೆ ನೀಡಿದೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಅಧ್ಯಕ್ಷೆ ವೀಣಾ ಶೆಟ್ಟಿ ಹೇಳಿದ್ದಾರೆ.

ಕಾಂಗ್ರೆಸಿನ ಹುಸಿ ಗ್ಯಾರಂಟಿಗಳನ್ನು ಘೋಷಿಸಿ ಚುನಾವಣೆ ಎದುರಿಸಿ ಕರ್ನಾಟಕವನ್ನು ಗೆದ್ದ ಹಾಗೆ ಎಂದು ತಿಳಿದಿದ್ದರು. ಆದರೆ ಅದು ಇನ್ನು ಆಗುವುದಿಲ್ಲ ಜನತೆ ಬಿಜೆಪಿಯ ಅಭಿವೃದ್ಧಿ ಚಿಂತನೆ ಇಟ್ಟುಕೊಂಡು ಪ್ರಚಾರ ನಡೆಸಿದ್ದು ಅದನ್ನು ಮೆಚ್ಚಿಕೊಂಡು ಜನರು ಬಿಜೆಪಿ ಪಕ್ಷಕ್ಕೆ ಮತ ನೀಡಿದ್ದಾರೆ. ದೇಶಕ್ಕೆ ಮೋದಿಯವರೆ ಗ್ಯಾರಂಟಿ ಎಂದಿರುವ ಪರಿಣಾಮ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದೆ. ಜನರು ನೀಡಿರುವ ತೀರ್ಪಿನಿಂದ ಕಾಂಗ್ರೆಸ್ ಮುಕ್ತ ಭಾರತ ಆಗುವ ಕಾಲ ಬಂದಿದೆ. ಮೂರು ರಾಜ್ಯಗಳ ಗೆಲುವಿನಿಂದ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಯನ್ನು 28 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version