Home Mangalorean News Kannada News ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಕೆ.ಸಿ.ಎಫ್ ಡೇ

ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಕೆ.ಸಿ.ಎಫ್ ಡೇ

Spread the love

ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಕೆ.ಸಿ.ಎಫ್ ಡೇ

ಜಿದ್ದಾ: ಕೆ.ಸಿ.ಎಫ್ ಜಿದ್ದಾ ಝೋನ್ ವತಿಯಿಂದ ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಕೆ.ಸಿ.ಎಫ್ ಡೇ ಕಾರ್ಯಕ್ರಮ ಶರಫಿಯ್ಯ ಕೆ.ಸಿ.ಎಫ್ ಸೆಂಟರ್ ನಲ್ಲಿ ನಡೆಯಿತು.

ಸಯ್ಯಿದ್ ಝಕರಿಯ್ಯಾ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹನೀಫ್ ಸಖಾಫಿ ಸಾಲೆತ್ತೂರು ಬುಖಾರಿ ಗೃಂಥದ ಹದೀಸ್ ಓದಿ ಕೊಡುವ ಮೂಲಕ ಅಸ್ಸುಫ್ಫ ದ್ವೀತೀಯ ಹಂತಕ್ಕೆ ಚಾಲನೆ ನೀಡಿದರು.ಕೆ.ಸಿ.ಎಫ್ ಸೌದಿ ರಾಷ್ತ್ರೀಯ ಅಧ್ಯಕ್ಷರಾದ ಸಯ್ಯಿದ್ ಹಬೀಬ್ ಕೋಯ ತಂಗಳ್,ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಅಬೂ ಹನೀಫಲ್ ಫೈಝಿ ತೆನ್ನಳ,ಅಶ್ರಫ್ ಸ‌ಅದಿ ದೇಲಂಪಾಡಿ ಆಶಂಸೆ ಭಾಷಣ ಮಾಡಿದರು.

ಕಾರ್ಯಕರ್ತನ ಒಂದು ದಿನ , ಆಧ್ಯಾತ್ಮಿಕತೆ&ಸಂಘಟಣೆ ಎನ್ನುವ ವಿಷಯದಲ್ಲಿ ಮುಸ್ತಫ ಸ‌ಅದಿ ಶಿಭಿರ ನಡೆಸಿ ಕೊಟ್ಟರು.ಅಸ್ಸುಫ್ಫ-1 ರಲ್ಲಿ ರಾಷ್ತ್ರೀಯ ಮಟ್ಟದಲ್ಲಿ ವಿಜೇತರಾದ ಇಕ್ಬಾಲ್ ಹಾಜಿ ಉಳ್ಳಾಲ್ ರವರಿಗೆ ಬಹುಮಾನ ನೀಡಲಾಯಿತು‌.

ಶೇರ್ &ಕೇರ್ ನಲ್ಲಿ ಸದಸ್ಯರು ಕೆ.ಸಿ.ಎಫ ನಿಂದಾಗಿ ತಮ್ಮ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಅನುಭವಗಳನ್ನು‌ಹಂಚಿ ಕೊಂಡರು.

ಅಲ್ತಾಫ್ ಈಶ್ವರಮಂಗಳ ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ಜಯಪುರ ಸ್ವಾಗತ ಮಾಡಿದರೆ.ಸಯ್ಯಿದ್ ಖಾಲಿದ್ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು.


Spread the love

Exit mobile version