ಸಿ.ಸಿ. ಆರ್.ಬಿ ಘಟಕದ ಎ.ಸಿ.ಪಿ ರವೀಶ್ ಎಸ್ ನಾಯಕ್ ಅವರಿಗೆ ರಾಷ್ಟ್ರಪತಿ ಸೇವಾ ಪದಕ

Spread the love

ಸಿ.ಸಿ. ಆರ್.ಬಿ ಘಟಕದ ಎ.ಸಿ.ಪಿ ರವೀಶ್ ಎಸ್ ನಾಯಕ್ ಅವರಿಗೆ ರಾಷ್ಟ್ರಪತಿ ಸೇವಾ ಪದಕ

ಮಂಗಳೂರು: 2024 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ   ರಾಷ್ಟ್ರಪತಿಯವರು  ಪ್ರಧಾನ ಮಾಡುವ ಶ್ಲಾಘನೀಯ (Meritorious Service) ಸೇವಾ ಪದಕಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿಯ ಸಿ.ಸಿ. ಆರ್.ಬಿ ಘಟಕದಲ್ಲಿ ಎ.ಸಿ.ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ  ರವೀಶ್ ಎಸ್ ನಾಯಕ್ ರವರು ಆಯ್ಕೆಯಾಗಿರುತ್ತಾರೆ.

ಸದ್ರಿಯವರು ಈ  ಹಿಂದೆ ಬಿಜಾಪುರ, ಗುಲಬರ್ಗ, ಯಾದಗಿರಿ  ಜಿಲ್ಲೆಯಲ್ಲಿ, ಉಡುಪಿ ಕರಾವಳಿ ಕಾವಲು ಪಡೆ ಘಟಕ, ಇಮಿಗ್ರೇಷನ್ ಹಾಗೂ ಮಂಗಳೂರು ನಗರ ಉರ್ವಾ ಮತ್ತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಸೇವೆ ಸಲ್ಲಿಸಿ ನಂತರ ಪದೋನ್ನತಿ ಹೊಂದಿ ಸಿ.ಸಿ.ಆರ್.ಬಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


Spread the love