ಸುರತ್ಕಲ್:  ಕಾಟಿಪಳ್ಳ ಅಬ್ದುಲ್ ಜಲೀಲ್ ಕೊಲೆ ಕೇಸ್; 2ನೇ ಪ್ರಮುಖ ಆರೋಪಿಗೆ ಜಾಮೀನು

Spread the love

ಸುರತ್ಕಲ್:  ಕಾಟಿಪಳ್ಳ ಅಬ್ದುಲ್ ಜಲೀಲ್ ಕೊಲೆ ಕೇಸ್; 2ನೇ ಪ್ರಮುಖ ಆರೋಪಿಗೆ ಜಾಮೀನು

ಕಾಟಿಪಳ್ಳದ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣದ ಎರಡನೇ ಪ್ರಮುಖ ಆರೋಪಿಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಎರಡನೇ ಪ್ರಮುಖ ಆರೋಪಿಯಾಗಿರುವ ಸುವಿನ್ ಕಾಂಚನ್‌ಗೆ ಹೈಕೋರ್ಟ್ ಜಾಮೀನು ನೀಡಿದೆ.

2022 ಡಿಸೆಂಬರ್ 24ರಂದು ಹಿಂದೂ ಮಹಿಳೆ ಜೊತೆಗೆ ಅನೈತಿಕ ಸಂಬಂಧದ ಸಂಶಯದ ದ್ವೇಷದಿಂದ ಆರೋಪಿಗಳು ಅಬ್ದುಲ್ ಜಲೀಲ್‌ನ ಅಂಗಡಿಗೆ ತೆರಳಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಬಳಿಕ ಆರೋಪಿಗಳ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಇದೀಗ 2ನೇ ಪ್ರಮುಖ ಆರೋಪಿ ಸುವಿನ್ ಕಾಂಚನ್‌ಗೆ ಜಾಮೀನು ಸಿಕ್ಕಿದ್ದು ಜೈಲಿನಿಂದ ಬಿಡುಗಡೆ ಆಗಲಿದ್ದಾನೆ


Spread the love