ಸುರತ್ಕಲ್ : ವ್ಯಕ್ತಿ ನಾಪತ್ತೆ ಪ್ರಕರಣ

Spread the love

ಸುರತ್ಕಲ್ : ವ್ಯಕ್ತಿ ನಾಪತ್ತೆ ಪ್ರಕರಣ

ಮನೆಯಿಂದ ಹೊರಗಡೆ ಹೋದ ವ್ಯಕ್ತಿ ವಾಪಾಸು ಬಾರದೆ ನಾಪ್ತೆಯಾಗಿರುವುದರ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಿಕೆರೆ ನಿವಾಸಿ ಅಶ್ವಿನಿ (29) ಎಂಬವರ ತಂದೆ ತಂದೆ ರಾಜು ಕುಲಾಲ್ (55) ರವರು ನರದ ಹಾಗೂ ಪಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದು ಈ ದಿನ ದಿನಾಂಕ 16-01-2024 ರಂದು ಪಿರ್ಯಾದಿದಾರರು ಎಂದಿನಂತೆ ಕೆಲಸಕ್ಕೆ ಹೋಗಿದ್ದು ಹಾಗೂ ಪಿರ್ಯಾದಿದಾರರ ತಾಯಿ ತರಕಾರಿ ತರಲೆಂದು ಕಾನಾ ಎಂಬಲ್ಲಿಗೆ ಹೋದ ಸಮಯ ಸುಮಾರು ರಾತ್ರಿ 7.00 ಗಂಟೆಗೆ ರಾಜು ಕುಲಾಲ್ ರವರು ಮನೆಯಿಂದ ಹೊರಟು ಹೋದವರು ವಾಪಸು ಮನೆಗೆ ಬಾರದೇ ಇದ್ದಾಗ ಪಿರ್ಯಾದಿದಾರರು ನೆರೆಹೊರೆಯವರಲ್ಲಿ ಮತ್ತು ಇತರೆ ಸ್ನೇಹಿತರಲ್ಲಿ ವಿಚಾರ ತಿಳಿಯಲಾಗಿ ರಾಜು ಕುಲಾಲ್ ರವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಈ ವರೆಗೂ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು ಕಾಣೆಯಾದವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ. ಬಗ್ಗೆ ಸುರತ್ಕಲ್ ಠಾಣಾ ಅ ಕ್ರ 07/2024 ಕಲಂ ಗಂಡಸು ಕಾಣೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಕಾಣೆಯಾದ ರಾಜು ಕುಲಾಲ್ ಚಹರೆ ಈ ಕೆಳಗಿನಂತಿದೆ.
1] ಪೂರ್ತಿ ಹೆಸರು: ರಾಜು ಕುಲಾಲ್, ಪ್ರಾಯ 55 ವರ್ಷ
2] ಎತ್ತರ : 5.6 ಅಡಿ , ಮೈಬಣ್ಣ: ಎಣ್ಣೆ ಕಪ್ಪು ಮೈ ಬಣ್ಣ, ಸಪೂರ ಶರೀರ
3] ಗೊತ್ತಿರುವ ಭಾಷೆ: ತುಳು, ಕನ್ನಡ
4] ಧರಿಸಿರುವ ಬಟ್ಟೆ: ಲುಂಗಿ ಮತ್ತು ಶರ್ಟ್

ಈ ಮೇಲ್ಕಂಡ ಕಾಣೆಯಾದಾ ರಾಜು ಕುಲಾಲ್ ಇವರ ಪತ್ತೆಗೆ ಸಹಕಾರಿಯಾಗುವಂತೆ ವಿವರವನ್ನು ವಾರ್ತಾ ಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮದಲ್ಲಿ ಪ್ರಕಟಿಸಬೇಕಾಗಿ ಹಾಗೂ ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣೆಗೆ 0824-2220540, 9480805360, 9480802345 ನಂಬ್ರಕ್ಕೆ ಅಧವಾ ಮಂಗಳೂರು ನಗರ ಕಂಟ್ರೋಲ್ ರೂಮ್ 0824-2220800. ಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡುವಂತೆ ಕೋರಬೇಕಾಗಿ ವಿನಂತಿ.


Spread the love