ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ನಾಲ್ವರ ಬಂಧನ

Spread the love

ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ನಾಲ್ವರ ಬಂಧನ

ಮಂಗಳೂರು: ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬಂದಿಗಳು ಬಂಧಿಸಿದ್ದಾರೆ.

ಬಂಧಿತರನ್ನು ನಿತಿನ್ (30), ಮೋನು (51), ಅಬುಬಕ್ಕರ್ (46) ಮತ್ತು ಅಬ್ದುಲ್ ರೆಹಮಾನ್ (50) ಎಂದು ಗುರುತಿಸಲಾಗಿದೆ.

ಅಗಸ್ಟ್ 1ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಂಚಿನಡ್ಕ ಪದವು ಎಂಬಲ್ಲಿ  ಬಾತ್ಮಿದಾರರು ಕೊಟ್ಟ ಮಾಹಿತಿ ಮೇರೆಗೆ ಪಂಚರೊಂದಿಗೆ ಸ್ಥಳಕ್ಕೆ ತೆರಳಿ ದೂರದಿಂದ ನೊಡಿ ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿರುದನ್ನು ಖಚಿತ ಪಡಿಸಿಕೊಂಡು ಅವರನ್ನು ಸುತ್ತುವರೆದಾಗ ಪೊಲೀಸರನ್ನು ಕಂಡು ಓಡುವಾಗ ಸಿಬ್ಬಂದಿಯವರು 4 ಜನರನ್ನು ಹಿಡಿದು ಕೊಂಡಿರುತ್ತಾರೆ

ಪಂಚರ ಸಮಕ್ಷಮ ಸ್ಥಳದಲ್ಲಿ ಸುಮಾರು 4600 ರೂ ಹಣ, ಒಂದು ಬೈಕ್ ಅಂದಾಜು ಬೆಲೆ ಸುಮಾರು 60,000ರೂ,4 ಮೊಬೈಲ್ ಪೊನ್ ಅಂದಾಜು ಬೆಲೆ ಸುಮಾರು 8000 ರೂ ವಶಪಡಿಸಿಕೊಂಡಿರುತ್ತಾರೆ.

ಈ ಕುರಿತಂತೆ   ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ 121/18  ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ 1963 ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

 


Spread the love